ಬೆಂಗ್ಳೂರಿನಲ್ಲಿ ಓಡಾಡಿದ ಅಪರೂಪದ ಕೃಷ್ಣಮೃಗ

Public TV
0 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪರೂಪದ ಕೃಷ್ಣಮೃಗ ರಸ್ತೆಯಲ್ಲಿ ಓಡಾಡಿ ಜನರನ್ನು ಅಚ್ಚರಿಗೊಳಿಸಿದೆ.

ಎಂ.ಎಸ್ ಪಾಳ್ಯದ ರಸ್ತೆಯಲ್ಲಿ ಇಂದು ಮಧ್ಯಾಹ್ನ ಒಂದು ಕಾಲಲ್ಲಿ ಕೃಷ್ಣಮೃಗ ಕುಂಟುತ್ತಾ ಓಡಾಡಿದೆ. ಅಪರೂಪದ ಕೃಷ್ಣಮೃಗವನ್ನು ನೋಡಿದ ಜನ ಅದನ್ನು ಹಿಡಿದು ಶೆಡ್‍ನಲ್ಲಿಟ್ಟು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ವನ್ಯಜೀವಿ ಸಂರಕ್ಷಕ ರಾಜೇಶ್ ಕೃಷ್ಣಮೃಗವನ್ನು ರಕ್ಷಿಸಿದ್ದಾರೆ. ಕಾಲಿಗೆ ಏಟಾಗಿದ್ದ ಕೃಷ್ಣಮೃಗವನ್ನು ಯಾರೋ ಭೇಟೆಯಾಡಿ ಬೆಂಗಳೂರಿಗೆ ತಂದಿರುವ ಶಂಕೆ ವ್ಯಕ್ತವಾಗಿದೆ. ಅದು ತಪ್ಪಿಸಿಕೊಂಡು ಬಂದಿದೆ ಎಂದು ವನ್ಯಜೀವಿ ಸಂರಕ್ಷಕ ಅಭಿಪ್ರಾಯ ಪಟ್ಟಿದ್ದಾರೆ. ಕೂಡಲೇ ಕೃಷ್ಣಮೃಗಾದ ಕಾಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬನ್ನೇರುಘಟ್ಟಕ್ಕೆ ಶಿಫ್ಟ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *