Giant-Killer – ಹಾಲಿ ಸಿಎಂ ಕೆಸಿಆರ್‌, ಭಾವಿ ಸಿಎಂ ರೇವಂತ್‌ ರೆಡ್ಡಿಯನ್ನೇ ಸೋಲಿಸಿದ ಬಿಜೆಪಿಯ ಅಭ್ಯರ್ಥಿ

Public TV
1 Min Read

ಹೈದರಾಬಾದ್‌: ತೆಲಂಗಾಣದಲ್ಲಿ (Telangana) ಬಿಜೆಪಿಯ ವೆಂಕಟ ರಮಣ ರೆಡ್ಡಿ (Katipally Venkata Ramana Reddy) ಹಾಲಿ ಸಿಎಂ ಕೆ ಚಂದ್ರಶೇಖರ್‌ ರಾವ್‌ (KCR) ಮತ್ತು ಭಾವಿ ಸಿಎಂ ಎಂದೇ ಬಿಂಬಿತರಾಗಿರುವ ಕಾಂಗ್ರೆಸ್ಸಿನ ರೇವಂತ್‌ ರೆಡ್ಡಿ (Revanth Reddy) ಅವರನ್ನು ಸೋಲಿಸಿ Giant-Killer ಆಗಿ ಹೊರ ಹೊಮ್ಮಿದ್ದಾರೆ.

ಕಾಮರೆಡ್ಡಿ (Kamareddy)ವಿಧಾನಸಭಾ ಕ್ಷೇತ್ರದಲ್ಲಿ ಕೆಸಿಆರ್‌ ಮಧ್ಯೆ ಫೈಟ್‌ ನಡೆಯಲಿದೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಅಂತಿಮ ಹಣಾಹಣಿಯಲ್ಲಿ ವೆಂಕಟ ರಮಣ ರೆಡ್ಡಿ ಜಯಗಳಿಸಿದ್ದಾರೆ. ಇದನ್ನೂ ಓದಿ: ಲೋಕ ಸಮರಕ್ಕೆ ಬೂಸ್ಟ್‌ – ಸೆಮಿಫೈನಲ್‌ ಗೆದ್ದ ಮೋದಿ

 

ಚುನಾವಣೆಯಲ್ಲಿ ವೆಂಕಟ ರಮಣ ರೆಡ್ಡಿ48.7 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದರು. ಉತ್ತರ ತೆಲಂಗಾಣದಲ್ಲಿ ಬರುವ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತದಾರರು 14.73% ಇದ್ದರೆ ಪರಿಶಿಷ್ಟ ಪಂಗಡದವರು 4.67% ಇದ್ದಾರೆ.  ಇದನ್ನೂ ಓದಿ: ತೆಲಂಗಾಣದಲ್ಲಿ ಬಿಆರ್‌ಎಸ್‌ ಸೋಲು – ತನ್ನನ್ನು ತಾನೇ ಟ್ರೋಲ್‌ ಮಾಡಿಕೊಂಡ ಕೆಸಿಆರ್‌ ಪುತ್ರ

2018ರ ಚುನಾವಣೆಯಲ್ಲಿ ಟಿಆರ್‌ಎಸ್‌ನ ಗಂಪ ಗೋವರ್ಧನ್‌ 68,167 ಮತಗಳನ್ನು ಪಡೆದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೊಹಮ್ಮದ್‌ ಅಲಿ ಶಬ್ಬೀರ್‌ 63,610 ಮತಗಳನ್ನು ಪಡೆದಿದಿದ್ದರು. ಬಿಜೆಪಿ 15,439 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿತ್ತು.

 

Share This Article