ಕತ್ತು ಸೀಳಿದ ಸ್ಥಿತಿಯಲ್ಲಿ ಬಿಜೆಪಿ ನಾಯಕನ ಶವ ಪತ್ತೆ

Public TV
1 Min Read

ಶ್ರೀನಗರ: ಜಮ್ಮು-ಕಾಶ್ಮೀರದ ಸೋಫಿಯಾಜ ಜಿಲ್ಲೆಯಲ್ಲಿ 30 ವರ್ಷದ ಬಿಜೆಪಿ ಯುವಮೋರ್ಚಾದ ನಾಯಕ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯವನ್ನು ಉಗ್ರರು ನಡೆಸಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಮೃತನನ್ನು ಗೌರ್ ಅಹ್ಮದ್ ಭಟ್ ಎನ್ನಲಾಗಿದೆ. ಇವರು ಶೋಫಿಯಾನಾದ ಬೊನಗಮ್ ಪ್ರದೇಶದ ನಿವಾಸಿ. ಕತ್ತು ಸೀಳಿದ ಸ್ಥಿತಿಯಲ್ಲಿ ಕಿಲೋರಾರಾದಲ್ಲಿನ ಆರ್ಚರ್ಡ್ ನಲ್ಲಿ ಗೌರ್ ಮೃತದೇಹ ಪತ್ತೆಯಾಗಿದೆ. ಭಟ್ ಭಾರತೀಯ ಜನತಾ ಯುವಮೋರ್ಚಾದ ಜಿಲ್ಲಾಧ್ಯಕ್ಷರಾಗಿದ್ದರು.

ಗೌರ್ ಸಾವಿನ ಸುದ್ದಿ ಹಬ್ಬುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಅಂದಿದ್ದಾರೆ.

ಭವಿಷ್ಯ ರೂಪಿಸುತ್ತಿರುವ ಯುವಕರನ್ನು ಉಗ್ರರು ಟಾರ್ಗೆಟ್ ಮಾಡುತ್ತಿರುವುದನ್ನು ನಿಲ್ಲಿಸಲ್ಲ. ಮೃತ ಗೌರ್ ಕುಟುಂಬದೊಂದಿಗೆ ಬಿಜೆಪಿ ಎಂದಿಗೂ ಇರುತ್ತದೆ ಅಂತಾ ಟ್ವಟ್ಟರ್ ನಲ್ಲಿ ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *