ಶಕ್ತಿ-ನಿಶ್ಯಕ್ತಿ, ಅನ್ನಭಾಗ್ಯ-ಕನ್ನಭಾಗ್ಯ, ಗೃಹ ಜ್ಯೋತಿ-ಪ್ರತಿ ಮನೆಗಳಲ್ಲೂ ಕಗ್ಗತ್ತಲು – ಕಾಂಗ್ರೆಸ್‌ ಗ್ಯಾರಂಟಿಗಳ ಕುರಿತು ಬಿಜೆಪಿ ಲೇವಡಿ

Public TV
1 Min Read

ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ (Government Of Karnataka) ಅನುಷ್ಠಾನಗೊಳಿಸಿರುವ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳ (Congress Guarantee Schemes) ಬಗ್ಗೆ ಬಿಜೆಪಿ ಲೇವಡಿ ಮಾಡಿದೆ.

ಈ ಕುರಿತು ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕ, ಕರ್ನಾಟಕ ಸರ್ಕಾರದ 6 ತಿಂಗಳ ಸಾಧನೆಯನ್ನು ಟೀಕಿಸಿದೆ. ಇದನ್ನೂ ಓದಿ: PUBLiC TV Impact ನೂರಾರು ಟನ್‌ ಕಲ್ಲಿದ್ದಲು ಕಳ್ಳತನ – ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಶಾಕ್‌, ತನಿಖೆಗೆ ಆದೇಶ

ಟ್ವೀಟ್‌ನಲ್ಲಿ ಏನಿದೆ?
6 ತಿಂಗಳಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿಗಳ ಅನುಷ್ಠಾನ,
ಶಕ್ತಿ-ನಿಶ್ಯಕ್ತಿ, ನಿಗಮಗಳ ಬಳಿ ಇಲ್ಲ ಸಂಪನ್ಮೂಲ ಸರ್ಕಾರ ಕೊಡುತ್ತಿಲ್ಲ ಅನುದಾನ
ಗೃಹ ಜ್ಯೋತಿ ಪ್ರತಿ ಮನೆಗಳಲ್ಲೂ ತುಂಬಿತು ಕಗ್ಗತ್ತಲು ಕೈಗಾರಿಕೆಗಳಿಗೂ ವಿದ್ಯುತ್ ಇಲ್ಲ ರೈತರಿಗೂ ಇಲ್ಲ
ಯುವ ನಿಧಿ – ಜಾರಿಗೆ ಬರಲೇ ಇಲ್ಲ ಬರುವುದೂ ಇಲ್ಲ, ಉದ್ಯೋಗವೂ ಇಲ್ಲ, ನಿಧಿಯೂ ಇಲ್ಲ
ಅನ್ನಭಾಗ್ಯ – ಕನ್ನಭಾಗ್ಯ, ಮೋದಿ ಸರ್ಕಾರದ ಅಕ್ಕಿಗೂ ಕನ್ನ ಜನರ ಖಾತಗೆ ಹಾಕುವ ಹಣಕ್ಕೂ ಕನ್ನ
ಗೃಹ ಲಕ್ಷ್ಮಿ – ಬೀದಿಗೆ ಬಂದು ನಿಂತ ಸ್ವಾಭಿಮಾನಿ ಮಹಿಳೆಯರು, ಎಟಿಎಂ ಸರ್ಕಾರ ಹಾಕಲೇ ಇಲ್ಲ 2ನೇ ತಿಂಗಳ ಹಣ, ಕಾಂಗ್ರೆಸ್‌ ಕನ್ನಡಿಗರ ಕಿವಿ ಮೇಲೆ ಹೂವಿಟ್ಟಿದೆ ಎಂದು ಲೇವಡಿ ಮಾಡಿದೆ. ಇದನ್ನೂ ಓದಿ: ಡಿಕೆಶಿ ವಿರುದ್ಧ ಹೆಚ್‌ಡಿಕೆ ಆರೋಪ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ: ಕಾಂಗ್ರೆಸ್‌ ವಕ್ತಾರ 

Share This Article