ಬಿಜೆಪಿ ಪರಿವರ್ತನಾ ಯಾತ್ರೆ: ವೇದಿಕೆಯ ಮೇಲೆ ರಾಜ್ಯ ನಾಯಕರಿಗೆ ಶಾ ಕ್ಲಾಸ್

Public TV
1 Min Read

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಮೊದಲ ದಿನವೇ ವೇದಿಕೆಯ ಮೇಲೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವೇದಿಕೆಯ ಮೇಲೆ ಹಿರಿಯ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಾರ್ಯಕ್ರಮ ಆಯೋಜನೆಗೊಂಡಿದ್ದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಹಾಕಿದ್ದ ಕುರ್ಚಿಗಳ ಮಧ್ಯಭಾಗ ಖಾಲಿ ಇತ್ತು. ಇದನ್ನು ನೋಡಿ ಅಸಮಾಧಾನಗೊಂಡ ಅಮಿತ್ ಶಾ ಕೇಂದ್ರ ಸಚಿವರಾದ ಅನಂತ್ ಕುಮಾರ್ ಮತ್ತು ಡಿವಿ ಸದಾನಂದ ಗೌಡರನ್ನು ತರಾಟೆಗೆ ತೆಗೆದುಕೊಂಡರು.

ಶಾ ಗರಂ ಆಗಿದ್ದನ್ನು ನೋಡಿ ನಾಯಕರು, ಶಾಸಕರು ವೇದಿಕೆ ಮೇಲಿನಿಂದ ಇಳಿದು ಜನರನ್ನು ಖಾಲಿ ಕುರ್ಚಿಗಳಲ್ಲಿ ಕೂರಿಸಲು ಮುಂದಾದರು.

ಬಿಜೆಪಿ ಪರಿವರ್ತನಾ ಯಾತ್ರೆಗೆ ಜನ ಕರೆತರುವಲ್ಲಿ ವೈಫಲ್ಯ ಆಗಿದ್ದು ಯಾಕೆ ಎಂದು ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಪಿಯುಷ್ ಗೋಯಲ್, ಅನಂತ್ ಕುಮಾರ್‍ಗೆ ಶಾ ಕ್ಲಾಸ್ ಮಾಡಿದರು.

ಅಮಿತ್ ಶಾ ಅಸಮಾಧಾನಗೊಂಡಿದ್ದರಿಂದ ಸಮಾವೇಶದ ವೇದಿಕೆ ಮೌನವಾಗಿತ್ತು. ಬಿಜೆಪಿ ನಾಯಕರು ಪೆಚ್ಚು ಮೊರೆ ಹಾಕಿ ಕುಳಿತುಕೊಂಡಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *