ಅನಾರೋಗ್ಯದ ನಡುವೆಯೂ ಜನಸೇವೆ ಮಾಡಿದ ಯತ್ನಾಳ್

Public TV
0 Min Read

ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅನಾರೋಗ್ಯದ ನಡುವೆಯೂ ಜನಸೇವೆ ಮಾಡಿದ್ದಾರೆ.

ಮಂಗಳವಾರದಿಂದ ಯತ್ನಾಳ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ವೈದ್ಯರು ಯತ್ನಾಳ್ ಅವರಿಗೆ ಡ್ರಿಪ್ ಹಾಕಿ ವಿಶ್ರಾಂತಿ ಮಾಡುವಂತೆ ಸೂಚಿಸಿದ್ದಾರೆ. ವೈದ್ಯರ ಮಾತನ್ನು ಲೆಕ್ಕಿಸದೇ ಯತ್ನಾಳ್ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

ಯತ್ನಾಳ್ ಮೊದಲು ವಿಜಯಪುರ ನಗರದ ವಾರ್ಡ್ ಸಂಖ್ಯೆ 4ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಪುರಾತನ ಬಾವಿ ಜೀರ್ಣೋದ್ಧಾರ ಹಾಗೂ ಗಂಗಾ ಪೂಜೆಯಲ್ಲಿ ಯತ್ನಾಳ್ ಭಾಗವಹಿಸುವ ಮೂಲಕ ಜನಸೇವೆಯಲ್ಲಿ ತೊಡಗಿಕೊಂಡರು.

ವೈದ್ಯರು ಯತ್ನಾಳ್ ಅವರ ಬಲಗೈಗೆ ಸಲಾಯಿನ್ ಸೆಟ್ ಅಳವಡಿಸಿದ್ದಾರೆ. ಹೀಗಿದರೂ ಯತ್ನಾಳ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *