ಅರಮನೆ ಮೈದಾನದಲ್ಲಿ ಕಸದ ರಾಶಿ- ಇದೇನಾ ಮೋದಿ ಕನಸಿನ ಸ್ವಚ್ಛ ಭಾರತ?

Public TV
1 Min Read

ಬೆಂಗಳೂರು: ಸ್ಟೇಜ್ ಮೇಲೆ ಸ್ವಚ್ಛ ಭಾರತದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡೋ ಬಿಜೆಪಿ ಸ್ವಚ್ಛತೆಯನ್ನೇ ಮರೀತಾ ಅನ್ನೋ ಪ್ರಶ್ನೆ ಎದ್ದಿದೆ.

ಭಾನುವಾರದಂದು ಅರಮನೆ ಮೈದಾನದಲ್ಲಿ ಬಿಜೆಪಿ ಪರಿರ್ವತನಾ ಸಮಾರೋಪ ಸಮಾರಂಭ ನಡೆಸಿದ್ದು, ಸಮಾವೇಶ ಮುಗಿಸಿದ ನಂತರ ಬಿಜೆಪಿ ನಾಯಕರು ಸ್ವಚ್ಛ ಭಾರತ ಮರೆತು ಹೊರಟಿದ್ದಾರೆ. ಅರಮನೆ ಮೈದಾನದ ತುಂಬಾ ರಾಶಿ ರಾಶಿ ಕಸ ಬಿದ್ದಿದೆ. ಮೈದಾನದ ತುಂಬಾ ಎಲ್ಲಿ ನೋಡಿದ್ರೂ ಕಸವೋ ಕಸ.

ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನ ಸಂಪೂರ್ಣ ಕೇಸರಿಮಯವಾಗಿತ್ತು. ಮೈದಾನದಾದ್ಯಂತ ಜನಸಾಗರವೇ ಸೇರಿತ್ತು. ಆದ್ರೆ ಪ್ರಧಾನಿ ಮೋದಿ ರ್ಯಾಲಿಯಿಂದಾಗಿ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ದಂಪತಿಯೊಬ್ಬರ ಬೀಗರೂಟ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

ಅರಮನೆ ಮೈದಾನದ ದಿ ರಾಯಲ್ ಸೆನೆಟ್‍ನಲ್ಲಿ ನಿನ್ನೆ ಬೀಗರೂಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದ್ರೆ ಮೋದಿ ಸಮಾವೇಶ ಹಿನ್ನೆಲೆಯಲ್ಲಿ ಬೀಗರ ಊಟವನ್ನು ಫೆಬ್ರವರಿ 11ಕ್ಕೆ ಮುಂದೂಡಿದ್ದಾರೆ.

ಈ ಬಗ್ಗೆ ದಿ ರಾಯಲ್ ಸೆನೆಟ್ ಮುಂದೆ ಬೋರ್ಡ್ ಕೂಡಾ ಹಾಕಿದ್ದಾರೆ. ಆಹ್ವಾನದ ಮೇರೆಗೆ ಬೀಗರ ಊಟಕ್ಕೆ ಬಂದಿದ್ದ ಸಂಬಂಧಿಕರು ಬೇರೆ ದಾರಿ ಇಲ್ಲದೇ ವಾಪಸ್ ಹೋದ್ರು.

Share This Article
Leave a Comment

Leave a Reply

Your email address will not be published. Required fields are marked *