ಕಾರ್ಪೋರೇಟರ್ ಮೇಲೆ ದೀಪಕ್ ಹತ್ಯೆ ಆರೋಪ- ದೈವದ ಮೊರೆ ಹೋದ ತಿಲಕ್ ರಾಜ್, ಕೃಷ್ಣಾಪುರ ಗ್ರಾಮಸ್ಥರು

Public TV
1 Min Read

ಮಂಗಳೂರು: ಕಾಟಿಪಳ್ಳದ ದೀಪಕ್ ಹತ್ಯೆ ವಿಚಾರದಲ್ಲಿ ಕಾರ್ಪೋರೇಟರ್ ತಿಲಕ್ ರಾಜ್ ಬಗ್ಗೆ ಅಪಪ್ರಚಾರಗೈದವರಿಗೆ ತಕ್ಕ ಶಾಸ್ತಿಯಾಗಬೇಕೆಂದು ಮಂಗಳೂರಿನ ಕಾಟಿಪಳ್ಳ ಬಳಿಯ ಕೃಷ್ಣಾಪುರದ ಗ್ರಾಮಸ್ಥರು ತುಳುನಾಡಿನ ಕಾರಣಿಕ ದೈವದ ಮೊರೆ ಹೋಗಿದ್ದಾರೆ.

ಕೃಷ್ಣಾಪುರದ ಕೋಡ್ದಬ್ಬು ದೈವಸ್ಥಾನದಲ್ಲಿ ಗ್ರಾಮಸ್ಥರು ಸೇರಿ ಈ ಪ್ರಾರ್ಥನೆ ಮಾಡಿದ್ರು. ಕಾರ್ಪೊರೇಟರ್ ತಿಲಕ್ ರಾಜ್, ಊರಿನ ಹಿರಿಯರು, ಅರ್ಚಕರು ಜೊತೆಯಾಗಿ ಭಕ್ತಿಪೂರ್ವಕ ಪ್ರಾರ್ಥನೆ ಸಲ್ಲಿಸಿ ಅಪಪ್ರಚಾರ ಮಾಡಿದವರಿಗೆ ಬುದ್ಧಿ ಕಲಿಸುವಂತೆ ಕೇಳಿಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ವಿರುದ್ಧ ದೈವದ ಮೊರೆ ಹೋದಂತಾಗಿದೆ.

ಮಾಜಿ ಸಿಎಂ ಕುಮಾರಸ್ವಾಮಿ, ದೀಪಕ್ ಹತ್ಯೆಯಲ್ಲಿ ಬಿಜೆಪಿ ಕಾರ್ಪೋರೇಟರ್ ಕೈವಾಡ ಇತ್ತೆಂದು ಬಹಿರಂಗ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಕುಮಾರಸ್ವಾಮಿ ಹೇಳಿಕೆ ನೀಡಲು ಶಾಸಕ ಮೊಯ್ದೀನ್ ಬಾವಾ ಪಿತೂರಿಯೇ ಕಾರಣ ಅನ್ನೋದು ಬಿಜೆಪಿಯವರ ಮಾತಾಗಿತ್ತು.

https://www.youtube.com/watch?v=AI_z5wUiDhM

https://www.youtube.com/watch?v=45DpmlmPyps

https://www.youtube.com/watch?v=p4Mfa77sfvE

https://www.youtube.com/watch?v=Wh-Y-8UCcgQ

https://www.youtube.com/watch?v=0vDJV9oPKaI

https://www.youtube.com/watch?v=cWNV3kO7l5E

https://www.youtube.com/watch?v=QZrnrHcPWig

Share This Article
Leave a Comment

Leave a Reply

Your email address will not be published. Required fields are marked *