ಬಿಜೆಪಿಗೆ ಬಂದಿದ್ದು ತಪ್ಪಾಗಿದೆ ಹೇಳಿಕೆಗೆ ಜಾಧವ್ ಸ್ಪಷ್ಟನೆ

Public TV
1 Min Read

ಕಲಬುರಗಿ: ಬಿಜೆಪಿ ಪಕ್ಷಕ್ಕೆ ಬಂದಿರುವುದು ತಪ್ಪಾಗಿದೆ ಎಂಬ ಹೇಳಿಕೆಗೆ ಅಭ್ಯರ್ಥಿ ಉಮೇಶ್ ಜಾಧವ್ ಸ್ಪಷ್ಟನೆ ನೀಡಿದ್ದಾರೆ.

ಗಂಡ ಹೆಂಡ್ತಿ ಮದುವೆಯಾದ ಬಳಿಕ ಸೆಟ್ ಆಗಲು ಸ್ವಲ್ಪ ದಿನ ಬೇಕಾಗುತ್ತದೆ. ಹೀಗಾಗಿ ಸೆಟ್ ಆಗಲು ನಿಮ್ಮ ಆಶೀರ್ವಾದ ಬೇಕು ಎಂದು ಗೋವಿಂದ ಕಾರಜೋಳ ಅವರ ಬಳಿ ಮನವಿ ಮಾಡಿದ್ದೇನೆ. ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳಿದ್ರು.

ನಾನು ತುಂಬಾ ಸಂತೋಷದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನೀವು 10 ಸಲ ಬೇಕಾದ್ರೆ ರಿವೈಂಡ್ ಮಾಡಿ ನೋಡಿ. ನಾನು ಬಿಜೆಪಿ ಸೇರಿ ತಪ್ಪು ಮಾಡಿದ್ದೇನೆ ಎಂದು ಎಲ್ಲಿ ಕೂಡ ಹೇಳಿಲ್ಲ. ನಾನು ಇನ್ನು ಪಕ್ಷದಲ್ಲಿ ಸೆಟ್ ಆಗುತ್ತಿದ್ದೇನೆ ಎಂದು ಮಾತ್ರ ಹೇಳಿದ್ದೇನೆ ಅಂದ್ರು.

ಮೂರು ದಿನದ ಹಿಂದೆ ಖುದ್ದು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸಹ ಭಾಷಣದ ಭರಾಟೆಯಲ್ಲಿ ಎಡವಿದ್ದರು. ರಾಜೀವ್ ಗಾಂಧಿ ತುಂಡು ತುಂಡಾಗಿ ಹತ್ಯೆ ಎಂದು ಹೇಳುವ ಬದಲು ರಾಹುಲ್ ಗಾಂಧಿ ಹತ್ಯೆ ಎಂದು ಹೇಳಿದ್ದರು. ಸ್ವಲ್ಪ ಕಮ್ಯೂನಿಕೇಷನ್ ಗ್ಯಾಪ್‍ನಿಂದ ಹೀಗಾಗುತ್ತದೆ ಎಂದು ಹೇಳುವ ಮೂಲಕ ತನ್ನ ತಪ್ಪನ್ನು ಸಮರ್ಥಿಸಿಕೊಂಡರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *