ಮೋದಿ ಫೋಟೋವನ್ನು ತೆಗೆಸಿದ ಪಂಚಾಯತ್‌ ಅಧ್ಯಕ್ಷ – ಡಿಎಂಕೆ ವಿರುದ್ಧ ಬಿಜೆಪಿ ಕಿಡಿ

Public TV
1 Min Read

ಚೆನ್ನೈ: ಕೇಂದ್ರದ ಹಿಂದಿ ಹೇರಿಕೆ ಯತ್ನಕ್ಕೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತೊಂದು ಮಜಲು ಮುಟ್ಟಿವೆ. ವೆಪ್ಪತ್ತೂರು ಟೌನ್‌ ಪಂಚಾಯತ್‍ನಲ್ಲಿ ಅಳವಡಿಸಲಾಗಿದ್ದ ಪ್ರಧಾನಿ ಮೋದಿ ಫೋಟೋವನ್ನು ಪಂಚಾಯತ್ ಅಧ್ಯಕ್ಷ ಅಂಜಮ್ಮಳ್ ತೆಗೆದುಹಾಕಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಫೋಟೋ ತೆಗೆದ ಬೆನ್ನಲ್ಲೇ ಬಿಜೆಪಿಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಪಂಚಾಯತ್‌ ಅಧ್ಯಕ್ಷರ ಕೃತ್ಯ ಖಂಡಿಸಿ ಬಿಜೆಪಿ ಪ್ರತಿಭಟನೆಗಳನ್ನು ನಡೆದಿದೆ. ಕುಂಬಕೋಣಮ್, ತಿರುವಿದೈ ಮರುತ್ತೂರ್‍ನಲ್ಲಿ ಪೊಲೀಸ್ ದೂರು ದಾಖಲಾಗಿದೆ. ಇದನ್ನೂ ಓದಿ: ಪ್ರಧಾನಿ ಒಂದೇ ಒಂದು ಮಾತು – ಈಶ್ವರಪ್ಪ ದಿಢೀರ್‌ ರಾಜೀನಾಮೆ

ಪ್ರತಿಭಟನೆ ಜೋರಾಗುತ್ತಿದ್ದಂತೆ ಎಚ್ಚೆತ್ತ ಪಂಚಾಯತ್‌ ಸಿಬ್ಬಂದಿ ನಡೆದಿದ್ದ ಯಡವಟ್ಟನ್ನು ಸರಿಪಡಿಸಿದ್ದಾರೆ. ಮತ್ತೆ ಮೋದಿ ಫೋಟೋವನ್ನು ಅಳವಡಿಸಿದ್ದಾರೆ.  ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳು ಹೊಟೇಲ್‌ಗಳಲ್ಲಿ ಉಳಿದುಕೊಳ್ಳುವಂತಿಲ್ಲ, 30 ನಿಮಿಷಗಳಿಗೂ ಹೆಚ್ಚು ಲಂಚ್ ಬ್ರೇಕ್ ಇಲ್ಲ: ಯೋಗಿ

ಬಿಜೆಪಿ ನಾಯಕ ಸಿಟಿಆರ್‌ ನಿರ್ಮಲ್‌ ಪ್ರತಿಕ್ರಿಯಿಸಿ, ನಿನ್ನೆ ತಂಜಾವೂರು ವೆಪ್ಪತ್ತೂರು ಪಂಚಾಯತ್ ಕಚೇರಿಯಲ್ಲಿ ಡಿಎಂಕೆ ಪ್ರಧಾನಿಯವರ ಫೋಟೋ ತೆಗೆದು ಹಾಕಿತ್ತು. ಇಂದು ಬಿಜೆಪಿ ಕೌನ್ಸಿಲರ್ ಚಂದ್ರಶೇಖರ್, ಮಂಡಲದ ಮುಖಂಡ ರಾಜೇಂದ್ರನ್ ಮತ್ತು ಬಿಜೆಪಿ ಕಾರ್ಯಕಾರಿಣಿಗಳು ಮತ್ತೆ ಅದೇ ಕಚೇರಿಯಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರದ ಪಕ್ಕದಲ್ಲಿ ಪ್ರಧಾನಿಯವರ ಚಿತ್ರವನ್ನು ಅಳವಡಿಸಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *