ಸಿಟಿ ರವಿಗೆ ಮೂಳೆ ಬಿರಿಯಾನಿ, ಚಿಕನ್ ಪಾರ್ಸೆಲ್ ಮಾಡಿದ ಕೈ ಪಡೆ

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಈಗ ಮಾಂಸಹಾರ ತಿಂದು ದೇಗುಲ ಪ್ರವೇಶದ ವಿಚಾರ ಸಕತ್ ಸದ್ದು ಮಾಡ್ತಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ (CT Ravi) ಗೆ ಬಿರಿಯಾನಿ, ನಲ್ಲಿಮೂಳೆ ಪಾರ್ಸೆಲ್ ಹೋಗಿದೆ. ಈ ಮೂಲಕ ಸಿಟಿ ರವಿಗೆ ಕೈ ಪಾಳಯ ಠಕ್ಕರ್ ಕೊಟ್ಟಿದೆ.

ಅಂದು ಕಾಂಗ್ರೆಸ್ (Congress) ನಾಯಕ ಸಿದ್ದರಾಮಯ್ಯ (Siddaramaiah) ಮಾಂಸಹಾರ ಸೇವಿಸಿ ಧರ್ಮಸ್ಥಳ (Dharmasthala) ದೇಗುಲದ ಭೇಟಿ ರಾಜಕೀಯದಲ್ಲಿ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗಿತ್ತು. ಇದನ್ನು ಅಂದು ಕಟುವಾಗಿ ಟೀಕೆ ಮಾಡಿದ್ದ ಬಿಜೆಪಿ ನಾಯಕ ಸಿಟಿ ರವಿ, ಮೊನ್ನೆ ನಾನ್ ವೆಜ್ ತಿಂದು ನಾಗಬನಕ್ಕೆ ಭೇಟಿ ಕೊಟ್ಟಿದ್ದು ಕೈಪಾಳಯಕ್ಕೆ ಸರಕು ಸಿಕ್ಕಂತಾಗಿದೆ. ಇದನ್ನು ವಿರೋಧಿಸಿ ಯೂತ್ ಕಾಂಗ್ರೆಸ್ (Youth Congress) ಪಡೆ ಇಂದು (ಶುಕ್ರವಾರ) ಬೆಳಗ್ಗೆ ಸಿಟಿ ರವಿಗೆ ನಲ್ಲಿ ಮೂಳೆ ಬಿರಿಯಾನಿ ಚಿಕನ್ ಪಾರ್ಸೆಲ್ ಮಾಡಿದ್ರು. ಅಲ್ಲದೇ ಸಿಟಿ ರವಿ ನಾನ್ ವೆಜ್ ತಿನ್ನುವ ಬಗ್ಗೆ ಅಣಕು ಪ್ರದರ್ಶನ ಮಾಡಿದ್ರು.

ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಸಿ.ಟಿ. ರವಿಗೆ ದೇವಾಲಯ ಪ್ರವೇಶ ನಿರ್ಬಂಧ ಹೇರಬೇಕು ಅಂತಾ ಮುಜರಾಯಿ ಇಲಾಖೆಗೆ ಕಾಂಗ್ರೆಸ್ ಆಗ್ರಹ ಪಡಿಸಿದೆ. ಕೂಡಲೇ ರವಿ ಕ್ಷಮೆಯಾಚನೆ ಮಾಡಬೇಕು ಅಂತಾ ಹೇಳಿದ್ರು. ಇದನ್ನೂ ಓದಿ: ಬೆಸ್ಟ್ ಸುಳ್ಳುಗಾರ ಆಫ್ ದಿ ಇಯರ್- ಸಿ.ಟಿ ರವಿಗೆ ಅವಾರ್ಡ್ ಕೊಟ್ಟ ಕಾಂಗ್ರೆಸ್

ಅಂದು ಸಿದ್ದರಾಮಯ್ಯ ನಡೆಯನ್ನು ಖಂಡಿಸಿ ಪುಂಖಾನುಪುಂಖವಾಗಿ ಮಾತಾನಾಡಿದ್ದ ಬಿಜೆಪಿ ನಾಯಕರು, ಈಗ ನಾನ್ ವೆಜ್ ಸಮರದಲ್ಲಿ ಸೈಲೆಂಟ್ ಆಗಿದ್ದಾರೆ. ನಾನು ದೇಗುಲದ ಹೊರಭಾಗದಲ್ಲಿ ಇದ್ದೆ, ದೇವರ ದರ್ಶನ ಮಾಡಿಲ್ಲ ಅಂತಾ ಸಿಟಿ ರವಿ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
1 Comment

Leave a Reply

Your email address will not be published. Required fields are marked *