ಬಸ್ಸಿನಡಿ ಸಿಲುಕಿದ್ರೂ ಹಿಂಬದಿಯಿಂದ ಹೊರ ಬಂದು ಎದ್ದು ನಿಂತ ಸವಾರ!

Public TV
1 Min Read

ಮಂಗಳೂರು: ಅದೃಷ್ಟ ಇದ್ದರೆ ಸಾವನ್ನೂ ಗೆದ್ದು ಬರಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಆಕ್ಟೀವಾ ಸವಾರನೊಬ್ಬ ಬಸ್ಸಿನ ಕೆಳಗೆ ಸಿಲುಕಿದರೂ ಎದ್ದು ಬಂದಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

ಜಿಲ್ಲೆಯ ವಿಟ್ಲ ಬಳಿಯ ಚಂದಳಿಕೆ ಎಂಬಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಂಡಾ ಆಕ್ಟೀವಾ ಸವಾರನೊಬ್ಬ ಮಾರುತಿ ಓಮ್ನಿಯನ್ನು ಓವರ್ ಟೇಕ್ ಮಾಡುವ ಯತ್ನದಲ್ಲಿ ಜಾರಿ ಬಿದ್ದಿದ್ದಾನೆ. ಪರಿಣಾಮ ಎದುರುಗಡೆಯಿಂದ ಬರುತ್ತಿದ್ದ ಬಸ್ ಅಡಿಗೆ ಸಿಲುಕಿದ್ದಾನೆ. ಬಳಿಕ ಸವಾರ ಪವಾಡಸದೃಶ ರೀತಿಯಲ್ಲಿ ಹಿಂಬದಿಯ ಟೈರ್ ಬಳಿಯಿಂದ ಎದ್ದು ಬಂದಿದ್ದಾನೆ.

ಸದ್ಯ ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೇವಲ ಅದೃಷ್ಟ ಬಲದಿಂದಲೇ ಸವಾರ ಬದುಕಿ ಬಂದಿದ್ದಾನೆ ಎನ್ನುವಂತಿತ್ತು.

Share This Article
Leave a Comment

Leave a Reply

Your email address will not be published. Required fields are marked *