30 ಅಡಿ ಆಳದ ತೊರೆಗೆ ಬಿದ್ದು ಬೈಕ್ ಸವಾರ ಸಾವು

Public TV
0 Min Read

ಬೆಂಗಳೂರು: ನಿಯಂತ್ರಣ ತಪ್ಪಿ ಬೈಕ್ ಸುಮಾರು ಮೂವತ್ತು ಅಡಿ ಆಳದ ರಸ್ತೆ ಪಕ್ಕದ ತೊರೆಗೆ ಬಿದ್ದು ಸವಾರರೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೊರೆ ಮೂಡಲಪಾಳ್ಯದ ಬಳಿ ನಡೆದಿದೆ.

ತಿಮ್ಮಸಂದ್ರ ಗ್ರಾಮದ ನಿವಾಸಿ ಹನುಮಂತರಾಜು ಮೃತ ದುರ್ದೈವಿ. ಬೈಕ್ ಚಕ್ರಕ್ಕೆ ಕಲ್ಲು ಸಿಲುಕಿದ ಪರಿಣಾಮ ಬೈಕ್ ರಸ್ತೆಯಿಂದ ಹಳ್ಳಕ್ಕೆ ಬಿದ್ದಿದೆ.

ಗಂಭೀರ ಗಾಯಗೊಂಡಿದ್ದ ಹನುಮಂತರಾಜು ತೀವ್ರ ರಕ್ತ ಸ್ರಾವದಿಂದಾಗಿ ಮೃತಪಟ್ಟಿದ್ದಾರೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *