ಸಿಗ್ನಲ್ ನಲ್ಲಿ ನಿಂತಿದ್ದ ಬೈಕಿಗೆ ತಮಿಳ್ನಾಡು ಬಸ್ ಡಿಕ್ಕಿ: ಸವಾರನ ಸ್ಥಿತಿ ಗಂಭೀರ

Public TV
1 Min Read

ಬೆಂಗಳೂರು: ಸಿಗ್ನಲ್ ನಲ್ಲಿ ನಿಂತಿದ್ದ ಬೈಕಿಗೆ ತಮಿಳುನಾಡು ಬಸ್ಸೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ನಗರದ ಸಿದ್ದಾಪುರ ಜಂಕ್ಷನ್ ಬಳಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ನದೀಮ್ ಎನ್ನಲಾಗಿದ್ದು, ಇವರು ಸೋಮವಾರ ರಾತ್ರಿ ವಿನೋಬ್ ನಗರದಲ್ಲಿ ಕೆಲಸ ಮುಗಿಸಿ ಸಿದ್ದಾಪುರ ಬಳಿಯಿರುವ ಚಿಕ್ಕಮ್ಮನ ಮನೆಯಲ್ಲಿ ಊಟ ಮುಗಿಸಿಕೊಂಡು ತಮ್ಮ ಬೈಕಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಸಿದ್ದಾಪುರದ ಗೋರಿ ಪಾಳ್ಯ ಬಳಿ ಈ ಅವಘಡ ಸಂಭವಿಸಿದೆ.

ಕೂಡಲೇ ಸ್ಥಳೀಯರು ಗಾಯಗೊಂಡ ನದೀಮ್ ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಈ ಭೀಕರ ಅಪಘಾತದ ಬಳಿಕ ಬಸ್ ಚಾಲಕ ಮತ್ತು ನಿರ್ವಾಹಕ ಸ್ಥಳಸದಿಂದ ಪರಾರಿಯಾಗಿದ್ದಾರೆ.

ಈ ಘಟನೆ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Share This Article
Leave a Comment

Leave a Reply

Your email address will not be published. Required fields are marked *