ಕಾರ್ & ಬೈಕ್ ನಡುವೆ ಡಿಕ್ಕಿ- ಬೈಕ್ ನಲ್ಲಿದ್ದ ಸಹೋದರರಿಬ್ಬರ ಸಾವು

Public TV
0 Min Read

ಧಾರವಾಡ: ಕಾರ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಧಾರವಾಡ ತಾಲೂಕಿನ ಪ್ರಭುನಗರ ಹೊನ್ನಾಪುರ ಗ್ರಾಮದ ಬಳಿ ನಡೆದಿದೆ.

ಧಾರವಾಡದ ಗಣೇಶ್ ಸಾಳುಂಕೆ(30) ಮತ್ತು ಸುರೇಶ್ ಸಾಳುಂಕೆ(26) ಮೃತಪಟ್ಟ ದುರ್ದೈವಿ ಸಹೋದರರು. ಮೃತರು ಗೋವಾದಿಂದ ಧಾರವಾಡ ನಗರಕ್ಕೆ ವಾಪಸ್ ಬರುತ್ತಿದ್ದರು. ಕಾರಿನಲ್ಲಿದ್ದವರು ಗದಗ ಕಡೆಯಿಂದ ಗೋವಾಗೆ ಹೊರಟಿದ್ದರು ಎಂದು ತಿಳಿದು ಬಂದಿದೆ.

ಇನ್ನೂ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *