ಬಿಗ್ ಬಾಸ್ ಮನೆಯ (Bigg Boss Kannada 10) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ದೊಡ್ಮನೆ ಆಟಕ್ಕೆ ತೆರೆ ಬೀಳಲು ಕೆಲವೇ ಕೆಲವು ದಿನ ಬಾಕಿಯಿದೆ. ಹೀಗಿರುವಾಗ ಮನೆಗೆ ಕುಟುಂಬಸ್ಥರ ಆಗಮನವಾಗುತ್ತಿದೆ. ಅದರಂತೆಯೇ ಸಂಗೀತಾ (Sangeetha Sringeri) ಫ್ಯಾಮಿಲಿ (Family) ಎಂಟ್ರಿ ಕೊಡುತ್ತಿದ್ದಂತೆ ವಿನಯ್ – ತುಕಾಲಿ ಎದುರು ಬರಲಾರದೇ ಅವಿತು ಕುಳಿತುಕೊಂಡಿದ್ದಾರೆ. ಅದಷ್ಟೇ ಅಲ್ಲ, ಎಷ್ಟು ಕಳಪೆ ಕೊಟ್ರು ತಲೆಕೆಡಿಸಿಕೊಳ್ಳಬೇಡ ಎಂದು ಅತ್ತಿಗೆ ಸುಚಿತ್ರಾ ಅವರು ಸಂಗೀತಾ ಕಿವಿ ಮಾತು ಹೇಳಿದ್ದಾರೆ.
ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಸಂಗೀತಾ ಅವರ ತಂದೆ ಶಿವಕುಮಾರ್, ತಾಯಿ ಭವಾನಿ, ಅತ್ತಿಗೆ ಸುಚಿತ್ರಾ, ಅಣ್ಣ ಕೂಡ ದೊಡ್ಮನೆಗೆ ಬಂದಿದ್ದಾರೆ. ಇಲ್ಲಿಯವರೆಗೆ ಪ್ರತಿ ಸ್ಪರ್ಧಿ ಮನೆಯಿಂದ ಒಬ್ಬರು, ಇಬ್ಬರು ಬಂದಿದ್ದರೆ, ಸಂಗೀತಾ ಮನೆಯಿಂದ ನಾಲ್ವರು ಬಂದಿದ್ದರು. ಇದನ್ನೂ ಓದಿ:‘ಕಾಟೇರ’ ಸಿನಿಮಾ ನೋಡಿ ಹಾಡಿಹೊಗಳಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ
ಮೊದಲು ಎಂಟ್ರಿ ಕೊಟ್ಟ ಅತ್ತಿಗೆ ಸುಚಿತ್ರಾಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ನಾನು ಏನೇ ಮಾಡಿದ್ರೂ ಎಲ್ಲರೂ ವಿರೋಧಿಸುತ್ತಾರೆ. ನನಗೆ ಇದೇ ವಿಷಯಕ್ಕೆ ಬೇಸರ ಆಗಿ ಅಳ್ತಿದೀನಿ ಅಷ್ಟೇ. ನಾನು ಕನ್ನಿಂಗ್, ನೆಗೆಟಿವ್, ಅವಕಾಶವಾದಿ ಅಂತ ಎಲ್ಲರೂ ಹೇಳ್ತಿದ್ದಾರೆ. ನಾನು ನೆಗೆಟಿವ್ ಆಗಿ ಕಾಣ್ತಿದೀನಾ? ನಾನು ಯಾರದ್ದಾದರ ಬಗ್ಗೆ ಕೆಟ್ಟದಾಗಿ ಮಾತಾಡಿದ್ನಾ? ಎಂದು ಅತ್ತಿಗೆ ಸಂಗೀತಾ ಪ್ರಶ್ನೆ ಹಾಕಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ನಮ್ರತಾಗೆ ಎಲ್ಲರೂ ಮತ ಹಾಕಿದ್ರು. ನಾನು ಆ ಜಾಗದಲ್ಲಿ ಇದ್ದಿದ್ರೆ ಯಾರೂ ಮತ ಹಾಕ್ತಿರಲಿಲ್ಲ. ನಮ್ರತಾಳನ್ನು ಎಲ್ಲರೂ ಇಷ್ಟಪಡ್ತಿರೋ ಹಾಗೆ ನನ್ನ ಯಾಕೆ ಇಷ್ಟಪಡಲ್ಲ? ನನಗೆ ಪ್ರತಿ ಸಲ ಕಳಪೆ ಕೊಡ್ತಾರೆ, ನನಗೆ ಉತ್ತಮ ಸಿಗಲ್ಲ. ನಾನು ಕಳೆದ ಬಾರಿ ಚೆನ್ನಾಗಿ ಆಡಿದ್ರೂ ಕಳಪೆ ಕೊಟ್ಟರು. ಮುಂದಿನ ವಾರವೂ ಅದೇ ಕಥೆ ಆಗತ್ತೆ ಎಂದು ಸಂಗೀತಾ ಅವರು ಬೇಸರ ಹೊರಹಾಕಿದ್ದಾರೆ.
ಸಂಗೀತಾ ಅವರು ಕೇಳಿದ ಪ್ರಶ್ನೆಗೆ ಅವರ ಅತ್ತಿಗೆ ಸುಚಿತ್ರಾ ನೀನು ತುಂಬ ಸ್ಟ್ರಾಂಗ್ ಸ್ಪರ್ಧಿ. ನಿನ್ನಿಂದ ನಾನು ಸ್ಫೂರ್ತಿ ಪಡೆದುಕೊಳ್ತೀನಿ. ನೀನು ನೆಗೆಟಿವ್ ಆಗಿ ಖಂಡಿತ ಕಾಣಿಸ್ತಿಲ್ಲ. ನಿನ್ನ ಹಾರ್ಟ್ ಜೊತೆ ನಮ್ಮ ಹಾರ್ಟ್ ಕನೆಕ್ಟ್ ಆಗಿದೆ, ನೀನು ಅತ್ತರೆ ನಮಗೆಲ್ಲ ಬೇಸರ ಆಗತ್ತೆ. ನೀನು ಮಾಡ್ತಿರೋದು ನೆಗೆಟಿವ್ ಆಗ್ತಿಲ್ಲ. ನೀನು ನಿನ್ನ ಆಟ ಆಡ್ತಿದೀಯಾ. ನಿನ್ನನ್ನು ಯಾರೇ ವಿರೋಧಿಸಲಿ, ಏನೇ ಆಗಲಿ, ಎಷ್ಟೇ ಕಳಪೆ ಬರಲಿ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡ, ನೀನು ಪ್ರತಿ ವಾರ ಕಳಪೆ ತಗೊಂಡರೂ ಪರವಾಗಿಲ್ಲ. ನಿನ್ನ ಆಟ ಚೆನ್ನಾಗಿ ಆಡು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ:‘ಕಾಟೇರ’ ಸಿನಿಮಾ ನೋಡಿ ಹಾಡಿಹೊಗಳಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ
ಸಂಗೀತಾ ಅಣ್ಣ ಬಂದ ಕೂಡಲೇ ವಿನಯ್ (Vinay Gowda), ತುಕಾಲಿ ಸಂತು, ಮೈಕಲ್ ಅವರು ಒಂದು ಕಡೆ ಕೂತಿದ್ದರು. ಅವರು ಆ ಜಾಗದಿಂದ ಎದ್ದಿರಲಿಲ್ಲ. ನಿನ್ನ ಫೀಲಿಂಗ್ಸ್ ಏನು ಅಂತ ಗೊತ್ತಾಗ್ತಿದೆ ನನಗೆ. ಸಂಗೀತಾ ಅಣ್ಣ ಬಂದಿದ್ದಾರೆ ಅಂತ ನೀನು ಇಲ್ಲೇ ಇದ್ದೀಯಾ ಅಲ್ವಾ. ಅದೇ ಕೂಡ ನಾನು ಮಾಡ್ತಿದ್ದೀನಿ. ಮೈಕಲ್ ಕೂಡ ಹಾಗೆ ಮಾಡ್ತಿದ್ದಾರೆ ಅಂತ ವಿನಯ್ಗೆ ತುಕಾಲಿ ಹೇಳಿದ್ದಾರೆ. ಸಂಗೀತಾ ಜೊತೆ ಹಲವು ಬಾರಿ ಜಗಳ ಆಗಿತ್ತು. ಹಾಗಾಗಿಯೇ ಅವರ ಕುಟುಂಬದಿಂದ ಅಂತರ ಕಾಯ್ದುಕೊಳ್ಳಲು ವಿನಯ್ & ಟೀಮ್ ಪ್ರಯತ್ನಿಸಿದ್ದರು.