ರಾಕೇಶ್‌ ಅಡಿಗ ಬಗ್ಗೆ ರೂಮ್‌ನಲ್ಲಿ ನಡೆದ ಅವಾಂತರದ ಬಗ್ಗೆ ಬಾಯ್ಬಿಟ್ಟ ಆರ್ಯವರ್ಧನ್‌ ಗುರೂಜಿ

Public TV
1 Min Read

ಕಿರುತೆರೆಯ ನಂಬರ್ ಒನ್ ಶೋ ಬಿಗ್ ಬಾಸ್‌ನಲ್ಲಿ ಆರ್ಯವರ್ಧನ್ ಗುರೂಜಿ(Aryavardhan Guruji) ತಮ್ಮ ನೇರ ಮಾತಿನ ಮೂಲಕ ಹೈಲೆಟ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ಆಗಿರುವ ಗುರೂಜಿ ರಾಕೇಶ್ ಅಡಿಗ (Rakesh Adiga) ಬಗ್ಗೆ ಹೇಳಿರುವ ಮಾತು ಸಖತ್ ವೈರಲ್ ಆಗುತ್ತಿದೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ, ಬೆಳಿಗ್ಗೆ ಎದ್ದಾಗ ಯಾರು ಆಗೋಕೆ ಇಷ್ಟಪಡಲ್ಲ ಎಂದು ಕೇಳಿದ್ದಾರೆ. ಈ ವೇಳೆ ಗುರೂಜಿ ಹೇಳಿರುವ ಮಾತು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಬಿಗ್ ಬಾಸ್ ಶೋ(Bigg Boss) ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಮೂರನೇ ವಾರಕ್ಕೆ ದೊಡ್ಮನೆ ಕಾಲಿಟ್ಟಿದೆ. ವಾರದ ಕ್ಯಾಪ್ಟನ್ ಆಗಿ ಆರ್ಯವರ್ಧನ್ ಗುರೂಜಿ ಆಯ್ಕೆ ಆಗಿದ್ದಾರೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚನ ಮುಂದೆ ಇಂಟರೆಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದೆ. ಒಂದು ವಾರ ರಾಕೇಶ್ ಜೊತೆಯಲ್ಲಿದ್ದ ಸಮಯದಲ್ಲಿ ಏನಾಯ್ತು ಎಂಬುದುದನ್ನ ಹೇಳಿಕೊಂಡಿದ್ದಾರೆ.

ವಾರಾಂತ್ಯದ ಪಂಚಾಯಿತಿಯಲ್ಲಿ ಯಾವ ವ್ಯಕ್ತಿ ಆಗೋಕೆ ಇಷ್ಟ ಇಲ್ಲ ಎಂದು ಸುದೀಪ್(Kicch Sudeep) ಸ್ಪರ್ಧಿಗಳಿಗೆ ಕೇಳಿದ್ದಾರೆ. ಈ ಸಮಯದಲ್ಲಿ ಗುರೂಜಿ ನನಗೆ ರಾಕೇಶ್ ಅಡಿಗ ಆಗೋಕೆ ಇಷ್ಟ ಇಲ್ಲ ಎಂದಿದ್ದಾರೆ. ಯಾಕೆ ಎಂದು ಕೇಳಿದಾಗ ರೂಮ್‌ನಲ್ಲಿ ನಡೆದಿರೋದನ್ನ ಹೇಳೋದ್ದಕ್ಕೆ ಆಗಲ್ಲ ಎಂದಿದ್ದಾರೆ. ಅರ್ಥ ಮಾಡಿಕೊಳ್ಳಿ ಎಂದು ಕುತೂಹಲ ಕೆರಳಿಸುವಂತೆ ಉತ್ತರಿಸಿದ್ದಾರೆ. ಇದನ್ನೂ ಓದಿ:ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ

ರಾಕೇಶ್‌ನ ಕಂಡರೆ ಭಯವಾಗುತ್ತದೆ. ರೂಮ್‌ನಲ್ಲಿ ಒಂದು ವಾರಗಳ ಕಾಲ ಸಾಕಷ್ಟು ವಿಚಾರಗಳನ್ನ ನಾವು ಹಂಚಿಕೊಂಡಿದ್ದೇವೆ ಎಂದು ಮಾತನಾಡಿದ್ದಾರೆ. ಜನಕ್ಕೆ ನೆಗಟಿವ್ ಮೇಸೆಜ್ ಹೋಗುತ್ತದೆ ಅದು ಎನು ಅಂತಾ ಹೇಳಿ ಎಂದು ರಾಕೇಶ್ ಕೂಡ ಗುರೂಜಿಗೆ ಮನವಿ ಮಾಡಿದ್ದಾರೆ. ಕಡೆಗೂ ಗುರೂಜಿ ಉತ್ತರ ನೀಡದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *