ಸೋನು ಆಯ್ಕೆ ಮಾಡಿದ್ದಕ್ಕೆ ಗುರೂಜಿಗೆ ಕೋಪ – ನನ್ನ ವೋಟಿಗೆ ನ್ಯಾಯ ಬೇಕೆಂದು ಮನೆ ತುಂಬಾ ರಾದ್ಧಾಂತ!

By
3 Min Read

ಷ್ಟು ದಿನ ಬಿಗ್ ಬಾಸ್ (Bigg Boss OTT) ಮನೆಯಲ್ಲಿ ನೋಡಿದ ಗುರೂಜಿಯೇ ಬೇರೆ. ಇವತ್ತು ನೋಡಿದ ಗುರೂಜಿಯೇ (Aryavardhan Guruji) ಬೇರೆ. ಮನೆ ಮಂದಿಯೆಲ್ಲಾ ಇಷ್ಟ ಪಡುವಂತೆ ನಡೆದುಕೊಳ್ಳುತ್ತಿದ್ದ ಆರ್ಯವರ್ಧನ್ ಇಂದು ಒಂದೇ ಒಂದು ಸ್ವಾರ್ಥದಿಂದ ಇಡೀ ಮನೆ ಮಂದಿಯೆಲ್ಲಾ ಕಿರಿಕಿರಿ ಅನುಭವಿಸುವಂತೆ ನಡೆದುಕೊಂಡಿದ್ದಾರೆ. ಜಯಶ್ರೀ ನನ್ನನ್ನೇ ಆಯ್ಕೆ ಮಾಡುತ್ತಾಳೆ ಎಂಬ ಭ್ರಮೆಯಲ್ಲಿದ್ದ ಗುರೂಜಿಗೆ ಜಯಶ್ರೀ (Jayashree) ಕೂಡ ಸರಿಯಾಗಿ ಗುನ್ನ ಇಟ್ಟಿದ್ದಾಳೆ. ಸೋನು (Sonu Srinivas Gowda) ಆಯ್ಕೆಯ ಬಳಿಕ ಗುರೂಜಿಯಿಂದ ಮನೆ ಅಕ್ಷರಶಃ ರಣರಂಗವಾಯಿತು.

ಗುರೂಜಿ ಸಣ್ಣ ಮಿಸ್ಟೇಕ್‍ನಿಂದಾಗಿ ಗುರೂಜಿ ತನಗೆ ಸಿಕ್ಕಿದ್ದ ಸ್ಪೆಷಲ್ ಅವಕಾಶವನ್ನು ಕಳೆದುಕೊಂಡರು. ಮನೆಯವರೆಲ್ಲ ಒಪ್ಪಿದರೆ ಜಯಶ್ರೀಯೇ ಮುಂದುವರಿಯಬಹುದು ಅಥವಾ ಬೇರೆ ಯಾರಿಗಾದರೂ ಆ ಸ್ಥಾನ ನೀಡಬಹುದು. ಒಂದಷ್ಟು ಚರ್ಚೆಗಳಾದ ಬಳಿಕ ವೋಟಿಂಗ್ ಮಾಡಲಾಯ್ತು. ಅದರಲ್ಲಿ ಸೋನುಗೂ ನಾಲ್ಕು ಜಯಶ್ರೀಗೂ ನಾಲ್ಕು ಬಂದಿತ್ತು. ಜಯಶ್ರೀ ಅದಾಗಲೇ ಹೇಳಿದ್ದಳು, ನಾನು ಎರಡು ಆಟ ಆಡಿದ್ದೀನಿ. ಬೇರೆಯವರಿಗೆ ನೀಡಬಹುದು ಎಂದು. ಅದರಂತೆ ಸೋನುಗೆ ಬಿಟ್ಟುಕೊಟ್ಟಳು. ಆದ್ರೆ ಅದು ಆಯ್ಕೆ ಮಾಡುವುದಕ್ಕೂ ಮುನ್ನ ಸೋನು, ನಾನು ನಿನ್ನನ್ನು ಸೆಲೆಕ್ಟ್ ಮಾಡಲ್ಲ ಎಂದೇ ಹೇಳಿದ್ದಳು. ಅದಕ್ಕೆ ಜಯಶ್ರೀಯ ಸಮ್ಮತ ಕೂಡ ಇತ್ತು. ಇದನ್ನೂ ಓದಿ: ಆರ್ಯವರ್ಧನ್ ಮುಗ್ಧರಲ್ಲ ಅನ್ನೋದು ಮನೆಮಂದಿಗೆಲ್ಲ ಪ್ರೂವ್ ಆಯ್ತು!

ಬಳಿಕ ಎಲ್ಲಾ ಮಾತುಕತೆ ಮುಗಿದ ಮೇಲೆ ಸೋನು ಮತ್ತು ಜಯಶ್ರೀ ಸೋಫಾದ ಕುಳಿತು ಮಾತನಾಡುತ್ತಿದ್ದರು. ಅಲ್ಲಿಗೆ ಬಂದ ಗುರೂಜಿ ಮತ್ತೆ ಜಗಳ ತೆಗೆದಿದ್ದಾರೆ. ನೀನು ಮಾಡಿದ್ದನ್ನು ನಾನು ಒಪ್ಪಲ್ಲ ಜಯಶ್ರೀ, ನಿನಗೆ ನಾನು ವೋಟ್ ಮಾಡಿದ್ದೆ. ನೀನು ಸೆಲೆಕ್ಟ್ ಆಗಿ ಮತ್ತೆ ನನ್ನೇ ಸೆಲೆಕ್ಟ್ ಮಾಡ್ತೀಯಾ ಎಂದುಕೊಂಡಿದ್ದೆ ಎಂದಿದ್ದಾರೆ. ಈ ಮಾತು ಮನೆಯವರಿಗೆಲ್ಲಾ ಬೇಸರ ತರಿಸಿದೆ.

ಆದರೆ ಜಯಶ್ರೀ, ಇದಕ್ಕೆ ವಿವರಣೆಯನ್ನು ನೀಡಿದ್ದಾಳೆ. ನಾನು ಯಾಕೆ ಸೋನುಳನ್ನು ಸೆಲೆಕ್ಟ್ ಮಾಡಿದ್ದು, ಅದಾಗಲೇ ನಾನು ಎರಡು ಆಟ ಆಡಿದ್ದೀನಿ. ಇರೋದು ಇದು ಒಂದೇ ವಾರ. ಸೋ ಎಲ್ಲರು ಆಡಲಿ. ಈಗ ನನಗೆ ಆಟಕ್ಕೆ ಕರೆದುಕೊಳ್ಳದೇ ಇದ್ದಾಗ ಎಷ್ಟು ನೋವಾಗುತ್ತಾ ಇತ್ತು ಬೇರೆಯವರಿಗೂ ಹಾಗೇ ಆಗಬಾರದು ಎಂದಾಗ ಗುರೂಜಿ, ನೋಡು ಅದು ನಿನ್ನ ಪರ್ಸನಲ್. ಇಲ್ಲಿ ವೋಟ್ ಹಾಕಿದವರಿಗೆ ಮರ್ಯಾದೆ ಹೋಗುತ್ತೆ. ನೆಕ್ಸ್ಟ್ ಟೈಮ್ ನೀನು ಕನ್ಫ್ಯೂಶನ್ ಆಗ್ತೀಯಾ ಅಂತ ನಿಂಗೆ ಯಾರು ವೋಟ್ ಹಾಕಲ್ಲ. ಮುಂದಿನ ಸಲ ವೋಟ್ ಹಾಕುವುದಕ್ಕೆ ಆಗಲ್ಲ ಎಂದು ಜಯಶ್ರೀ, ಸೋನುಳನ್ನೂ ಆಯ್ಕೆ ಮಾಡಿದ್ದೇ ತಪ್ಪು ಎಂದೇ ವಾದಿಸಿದ್ದಾರೆ. ಇದನ್ನೂ ಓದಿ: ಬುಲ್ಡೋಜರ್ ಬಲಿಷ್ಠರ ಗೋಡೆನೂ ಕೆಡುವುತ್ತಾ ಎಂದು ಸಿಎಂಗೆ ತಿವಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

ಡಿಸಿಷನ್ ತೆಗೆದುಕೊಂಡಾಗ ನೀವೂ ನನ್ನ ಕೇಳಬೇಕಿತ್ತು. ನಾಲ್ಕು ಆಟಗಳನ್ನು ನಾವಿಬ್ಬರೇ ಆಡೋಣಾ. ಉಳಿದ ಆಟಗಳು ದೇವರಿಕ್ಕಿದ್ದಂತೆ ಆಗಲಿ ಎಂದುಕೊಂಡಿದ್ದೆ. ನಾನು ಗೆದ್ದರೆ ನಿನ್ನೆ ಕರೆಯುತ್ತಿದ್ದೆ ಎಂದಿದ್ದಾರೆ. ಬಳಿಕ ಸೋನು ಮಾತನಾಡಿ, ಗುರೂಜಿ ಇದು ಅವಳ ಆಯ್ಕೆ. ಅವಳು ನನ್ನೆ ಆಯ್ಕೆ ಮಾಡುತ್ತಾ ಇದ್ದಳು. ನೀವ್ಯಾಕೆ ಗುರೂಜಿ ಇಷ್ಟೊಂದು ಮಾತನಾಡುತ್ತಿದ್ದೀರಾ ಎಂದಿದ್ದಾಳೆ. ಆಗ ಮತ್ತೆ ಮಾತನಾಡಿದ ಗುರೂಜಿ, ನಾನು ಅವಳಿಗೆ ವೋಟ್ ಹಾಕಿದ್ದೀನಿ. ಅದಕ್ಕೆ ಮಾತನಾಡಿದ್ದೀನಿ. ಜಯಶ್ರೀ ಈ ಡಿಸಿಷನ್ ನೀನು ನಿನ್ನ ಲೈಫ್ ನಲ್ಲೂ ಅಳವಡಿಸಿಕೊಳ್ಳಬೇಕು. ನೀನು ಗೆದ್ದು ನನ್ನೇ ಕರೆದುಕೊಂಡು ಬರಬಹುದಿತ್ತು ಎಂದಾಗ ಜಯಶ್ರೀ ಅದಕ್ಕೆ ಉತ್ತರ ಕೊಟ್ಟಿದ್ದಾಳೆ, ನೀವೂ ಎರಡು ಸಲ ನನ್ನನ್ನು ಕರೆದಿದ್ದಕ್ಕೆ ಮನೆಯವರು ಬೇಜಾರು ಮಾಡಿಕೊಂಡಿದ್ದಾರೆ. ಇನ್ನು ಮತ್ತೆ ಮತ್ತೆ ನಾವೇ ಆಡುವುದಾ ಎಂದರೆ, ಅದು ನೂರು ಸಲ ಆಗಲಿ. ಇದು ಬಿಗ್ ಬಾಸ್ ರೂಲ್ಸ್. ಬಿಗ್ ಬಾಸೇ ಹೇಳಿರುವಾಗ ನಾವ್ಯಾರು. ಜನರು ನೆಕ್ಸ್ಟ್ ಬಿಗ್ ಬಾಸ್ ಫಸ್ಟ್. ಜನರು ಮೆಚ್ಚುವುದಕ್ಕೋಸ್ಕರವೇ ಆಡುತ್ತಿದ್ದೀವಿ ಎಂದು ಹೇಳಿದ್ದನ್ನೇ ಹೇಳಿ ಮನೆಯವರಿಗೆಲ್ಲಾ ಬೇಸರ ಮಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆ ಕಂಡ ಅಚ್ಚರಿಯ ಕ್ಷಣಗಳು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *