ಬಿಗ್ ಬಾಸ್ ನೀಡಿದ ಆದೇಶದಿಂದ ದೊಡ್ಮನೆ ಶೇಕ್

Public TV
2 Min Read

ಬಿಗ್ ಬಾಸ್ ಮನೆ ಇದೀಗ ರಣರಂಗವಾಗಿದೆ. ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ದೊಡ್ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಜಟಾಪಟಿ ಜೋರಾಗಿದೆ. ಪ್ರತಿ ವಾರದ ಆರಂಭದಲ್ಲಿ ನಾಮಿನೇಷನ್ ಪ್ರಕ್ರಿಯೆ ಕನ್ಫೆಷನ್ ರೂಂನಲ್ಲಿ ನಡೆಯುತ್ತಿತ್ತು. ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ನಾಮಿನೇಷನ್ ಈಗ ಎಲ್ಲರ ನಡುವಲ್ಲೇ ನಡೆದಿದೆ. ಇದೀಗ ಮನೆಯ ಚಿತ್ರಣವೇ ಬದಲಾಗಿದೆ.

ದೊಡ್ಮನೆಯಲ್ಲಿ ಆಟ ಸಾಕಷ್ಟು ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿನ ಟ್ವಿಸ್ಟ್‌ಗೆ ಮನೆ ದಗ ದಗ ಎಂದು ಹೊತ್ತು ಉರಿಯುತ್ತಿದೆ. ಪ್ರತಿ ವಾರದ ಆರಂಭದಲ್ಲಿ ನಾಮಿನೇಷನ್ ನಡೆಯುತ್ತದೆ. ಈ ರೀತಿ ನಾಮಿನೇಷನ್ ಆದ ಒಬ್ಬರು ವಾರಾಂತ್ಯದಲ್ಲಿ ಔಟ್ ಆಗುತ್ತಾರೆ. ಇದು ಬಿಗ್ ಬಾಸ್ ಮನೆಯ ಸಂಪ್ರದಾಯ. ದೊಡ್ಮನೆಯಲ್ಲಿ ಕೆಲವರು ಜತೆಗೇ ಇದ್ದರೂ ನಾಮಿನೇಷನ್ ಮಾಡಿ ಬಿಡುತ್ತಾರೆ. ಆದರೆ, ಈ ಬಾರಿ ಆ ರೀತಿ ಇರಲಿಲ್ಲ. ಬಿಗ್ ಬಾಸ್ ಹೊಸ ಆದೇಶ ನೀಡಿದ್ದರು. ಎಲ್ಲರೂ ನಿಂತಲ್ಲಿಂದಲೇ ಎಲ್ಲರ ಎದುರಲ್ಲೇ ನಾಮಿನೇಷನ್​ಗೆ ಇಬ್ಬರ ಹೆಸರನ್ನು ಹೇಳಬೇಕು. ಈ ಮೂಲಕ ಬಿಗ್‌ ಬಾಸ್‌ ಬಿಗ್‌ ಟ್ವಿಸ್ಟ್‌ ನೀಡಿದ್ದಾರೆ. ಇದನ್ನೂ ಓದಿ:ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

ಈ ಬಾರಿ ನಾಮಿನೇಷನ್ ಪ್ರಕ್ರಿಯೆ ಓಪನ್ ಆಗಿ ನಡೆದಿರುವುದರಿಂದ ಯಾರು ಯಾರನ್ನು ನಾಮಿನೇಷನ್ ಮಾಡಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಈ ಕಾರಣಕ್ಕೆ ಮನೆಯಲ್ಲಿ ಬಿಸಿಯ ವಾತಾವರಣ ನಿರ್ಮಾಣ ಆಗಿದೆ. ಈಗಾಗಲೇ ಐಶ್ವರ್ಯ, ನವಾಜ್, ದರ್ಶ್‌ ಚಂದ್ರಪ್ಪ ಮನೆಯಿಂದ ಹೊರಬಂದಿದ್ದಾರೆ. ಮುಂದಿನ ವಾರ ಮನೆಯಿಂದ ಯಾರು ಬರಲಿದ್ದಾರೆ ಎಂಬದನ್ನ ಕಾದುನೋಡಬೇಕಿದೆ.

ಬಿಗ್ ಬಾಸ್ ಮನೆಯಿಂದ ಹೊರಬರುವಾಗ ದರ್ಶ್‌ ಚಂದ್ರಪ್ಪ ಅವರು ರೂಪೇಶ್ ಶೆಟ್ಟಿ ಹೆಸರನ್ನು ನಾಮಿನೇಟ್ ಮಾಡಿದ್ದರು. ಹೀಗಾಗಿ ರೂಪೇಶ್ ನೇರವಾಗಿ ನಾಮಿನೇಟ್ ಆಗಿದ್ದರು. ದೀಪಿಕಾ ದಾಸ್ ಅವರು ಕ್ಯಾಪ್ಟನ್ ಆದ ಕಾರಣ ಅವರನ್ನು ನಾಮಿನೇಟ್ ಮಾಡುವಂತೆ ಇರಲಿಲ್ಲ. ಅಂತಿಮವಾಗಿ, ಗುರೂಜಿ, ಕಾವ್ಯಶ್ರೀ, ಮಯೂರಿ, ನೇಹಾ ಗೌಡ, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಐಯ್ಯರ್ ನಾಮಿನೇಟ್ ಆಗಿದ್ದಾರೆ. ನಾಲ್ಕನೇ ವಾರದ ಆಟದಲ್ಲಿ ಯಾವ ಸ್ಪರ್ಧಿ ಹೊರಬರಲಿದ್ದಾರೆ ಎಂಬುದರ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *