ಜಯಶ್ರೀ ಮೇಲೆ ಸುದೀಪ್ ದೂರುಗಳ ಸುರಿಮಳೆ – ಕಣ್ಣೀರಾಕುತ್ತಾ ನಟಿ ಕ್ಷಮೆ

Public TV
3 Min Read

ಬಿಗ್ ಬಾಸ್ ಮನೆಯಲ್ಲಿ ಈ ವಾರ ಜಯಶ್ರೀ ನಡವಳಿಕೆ ಸ್ವಲ್ಪ ಕಿರಿಕಿರಿ ಉಂಟುಮಾಡಿದೆ. ಮನೆಯವರ ಜೊತೆ ತುಂಬಾನೇ ಒರಟಾಗಿ ನಡೆದುಕೊಳ್ಳುತ್ತಿದ್ದ ಅವರು ಏನಾದರೂ ಹೇಳಿದರೆ ಅದನ್ನು ಕೂಲಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಈ ಬಗ್ಗೆ ಜಶ್ವಂತ್ ಕ್ಯಾಪ್ಟನ್ಸಿಯಲ್ಲಿಯೂ ಮನಸ್ತಾಪಗಳನ್ನು ಮಾಡಿಕೊಂಡಿದ್ದರು. ನನ್ನನ್ನು ಯಾಕೆ ಆಟಕ್ಕೆ ತೆಗೆದುಕೊಳ್ಳಲ್ಲ ಎಂದು ಗದರಿದ್ದು, ಕೆಲವೊಂದು ರಿವೇಂಜ್‌ಗಳನ್ನು ತೀರಿಸಿಕೊಂಡಿದ್ದಾರೆ. ಇದೆಲ್ಲವನ್ನು ಗಮನಿಸಿದ್ದ ಸುದೀಪ್ ಇದೀಗ ಜಯಶ್ರೀಗೆ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾರೆ.

ಒಂದು ಆಟ ಅಂತ ಬಂದಾಗ ಯಾವ ಪ್ಯಾರಾ ಮೀಟರ್ಸ್ ಇಟ್ಟುಕೊಂಡು ಕಂಟೆಸ್ಟೆಂಟ್‌ನ ಆಯ್ಕೆ ಮಾಡಬೇಕು ಎಂದು ಜಯಶ್ರೀಯನ್ನೇ ಸುದೀಪ್ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಜಯಶ್ರೀ, ಆ ಟಾಸ್ಕ್ ಏನಿರುತ್ತೆ, ಅದಕ್ಕೆ ಸೂಕ್ತವಾದ ವ್ಯಕ್ತಿಯನ್ನು ನೋಡಿ ಸೆಲೆಕ್ಟ್ ಮಾಡುತ್ತಾರೆ ಎದು ಜಯಶ್ರೀಯೇ ಉತ್ತರ ನೀಡಿದ್ದಾರೆ. ಜೊತೆಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಇದ್ದ ಆಟದಲ್ಲಿ ನಾನು ಆಡಬಲ್ಲೆ ಎಂದು ಹೇಳಿದರೂ ತೆಗೆದುಕೊಳ್ಳಲಿಲ್ಲ. ಹೊರಗಡೆ ಬಂದಾಗ ನಾನು ಕೇಳಿದಾಗಲೂ ಸರಿಯಾದ ಕಾರಣ ಕೊಡಲೇ ಇಲ್ಲ ಎಂದಿದ್ದಾರೆ. ಈ ಬಗ್ಗೆ ತಕ್ಷಣ ಸುದೀಪ್ ಅವರು ಜಶ್ವಂತ್ ಬಳಿ ಕ್ಲಾರಿಟಿ ತೆಗೆದುಕೊಂಡಿದ್ದಾರೆ.

ಕ್ಯಾಪ್ಟನ್ ಅಂತ ಬಂದಾಗ ಅವರವರ ಅಭಿಪ್ರಾಯವನ್ನಿಟ್ಟುಕೊಂಡು ಹೋಗುತ್ತಾರೆ. ಮುಂದೆ ನೀವೂ ಕ್ಯಾಪ್ಟನ್ ಆದಾಗ ಇದೇ ರೀತಿ ನಡೆದುಕೊಳ್ಳಬಹುದು. ಸಾಕಷ್ಟು ಜನ ಇದ್ದಾಗ ಕ್ಯಾಪ್ಟನ್ ಒಂದೆರಡು ಜನರನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವೂ ಏನೇನೋ ತಲೆಯಲ್ಲಿ ಇಟ್ಟುಕೊಂಡು ಯೋಚನೆ ಮಾಡುತ್ತೀರಾ. ಮಾತಾಡುವಾಗ ಸೆಲೆಕ್ಟ್ ಆಗಿಲ್ಲ ಎಂಬ ಕಾರಣಕ್ಕೆ ನೀವಾಡುವ ಮಾತುಗಳಿಗೆ ಅವರು ರಿಯಾಕ್ಟ್ ಕೂಡ ಮಾಡುವುದಕ್ಕೆ ಆಗಲ್ಲ. ಏಕೆಂದರೆ ಅವರು ಕ್ಯಾಪ್ಟನ್. ಇಲ್ಲಿ ಬರೀ ನೀವು ಮಾತ್ರವಲ್ಲ. ಹೊರಗಡೆಯವರು ಕೂಡ ನಿಮ್ಮನ್ನು ನೋಡುತ್ತಿರುತ್ತಾರೆ ಎಂದು ಒಂದಷ್ಟು ಬುದ್ದಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಉದಯ್‌ ಸೂರ್ಯ ಔಟ್

ಬಳಿಕ ಒಂದಷ್ಟು ಮಾತು ಕತೆಗಳು ಮುಗಿದು, ಮತ್ತೆ ಜಯಶ್ರೀ ವಿಚಾರಕ್ಕೆ ಬಂದಿರುವ ಸುದೀಪ್, ಮನೆ ಮಂದಿ ಕ್ಷಮೆ ಕೇಳುವುದರಲ್ಲಿ ಪ್ರಾಮಾಣಿಕತೆ ಇತ್ತಾ ಎಂದು ಪ್ರಶ್ನೆ ಮಾಡಿದರು. ಸಾನ್ಯಾ ಹಾಗೂ ನಂದಿನಿ ಇಬ್ಬರು ಕೂಡ ಜಯಶ್ರೀ ವಿಚಾರವಾಗಿಯೇ ಮಾತನಾಡಿದರು. ಖಂಡಿತ ಇಲ್ಲ ಸರ್, ಕ್ಷಮೆ ಕೇಳಿದರೆ ಆ ಮೂಮೆಂಟ್‌ಗೆ ಜಗಳ ಎಂಡ್ ಆಗುತ್ತೆ ಎಂಬಂತೆ ಕ್ಷಮೆ ಕೇಳಿದ್ದುಂಟು. ಆ ಕ್ಷಣಕ್ಕೆ ಅದು ಮುಗಿದು ಹೋಗಲಿ. ಮೀನ್ ಮಾಡಿಲ್ಲ ಎಂದಿದ್ದಾರೆ. ಈ ಕ್ಷಮೆ ಬಗ್ಗೆ ಜಯಶ್ರೀ ಬಳಿಯೂ ಸುದೀಪ್ ಸ್ಪಷ್ಟನೆ ಕೇಳಿದ್ದಾರೆ. ಇದಕ್ಕೆ ಸುದೀಪ್ ಉದಾಹರಣೆ ಕೊಟ್ಟು ಬುದ್ದಿ ಮಾತು ಹೇಳಿದ್ದಾರೆ. ಯಾರಾದರೂ ಬುದ್ದಿ ಹೇಳಿದರೆ ಅದಕ್ಕೆ ತಿರುಗಿ ಉತ್ತರ ನೀಡುತ್ತೀರಿ. ಚೈತ್ರಾ ಅವರಿಗೆ ಕೇಳುತ್ತೀರಿ ನೀವೂ ಲಿಪ್ ಸ್ಟಿಕ್ ತಂದಿಲ್ವಾ ಅಂತ ಹೇಳಿ ಓಲೆ ತರುತ್ತೀರಿ. ನೀವೂ ನಿಮ್ಮ ತಪ್ಪನ್ನು ಹೇಳಿದಾಗ ಅವರು ಮಾಡಿದಾರೆ ನಾನು ಮಾಡಿದ್ದೀನಿ ಎಂದು ರಕ್ಷಣೆ ಮಾಡಿಕೊಳ್ಳುತ್ತೀರಿ ಎಂದಿದ್ದಾರೆ.

ಅದಕ್ಕೆ ಉತ್ತರ ನೀಡಿದ ಜಯಶ್ರೀ, ನಾನು ಮಾಡಿದ ತಪ್ಪು ನನಗೆ ಅರಿವಾಗಿದೆ. ಬಿಗ್ ಬಾಸ್‌ನಿಂದ ಆದೇಶ ಬಂದ ಮೇಲೆ ರಿಗ್ರೇಟ್ ಮಾಡಿಕೊಂಡಿದ್ದೀನಿ. ಆ ಒಂದು ನಡವಳಿಕೆಯನ್ನು ನಾನು ಬದಲಾಯಿಸಿಕೊಳ್ಳಬೇಕೆಂದುಕೊಂಡಿದ್ದೇನೆ ಎಂದಿದ್ದಾರೆ. ಮುಂದುವರೆದು ದೂರುಗಳ ಸುರಿಮಳೆಯನ್ನೇ ಸುರಿಸಿದ ಸುದೀಪ್, ಟಿಶ್ಯು ಪೇಪರ್ ಹೊರ ತರುವಾಗ ಉದಯ್ ಬೇಡ ಅಂತ ಹೇಳುತ್ತಾರೆ. ಕಂಟೆಸ್ಟೆಂಟ್ ಮೇಲೆ ನೀರು ಹಾಕುವಾಗ ಮೈಕ್ ಹಾಳಾಗುತ್ತೆ ಅಂತ ಕೆಲವರು ಹೇಳುತ್ತಾರೆ. ಆದರೂ ಗಮನಿಸಲಿಲ್ಲ. ಆ ಸಮಯದಲ್ಲಿ ನಿಮ್ಮ ಬಾಯಿಂದ ಬಂದ ಮಾತು ಏನಿತ್ತು ಗೊತ್ತಾ? ನನ್ನ ಮೈಕ್ ಚೇಂಜ್ ಮಾಡಿದ್ದಾರೆ ನಿಮ್ಮ ಮೈಕ್ ಚೇಂಜ್ ಮಾಡುತ್ತಾರೆ ಬಿಡಿ. ಬೇರೆ ಏನು ಕೆಲಸ ಇರುತ್ತೆ ಬಿಗ್ ಬಾಸ್‌ಗೆ ಎಂಬ ಅರ್ಥದಲ್ಲಿ ಹೇಳಿದ್ದೀರಿ ಎಂದಾಗ ಜಯಶ್ರೀ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಕಣ್ಣಿಗೆ ಸ್ಪ್ರೇ ಮಾಡುವಾಗ ಅದು ಡೇಂಜರ್ ಎಂದು ರಾಕೇಶ್ ಹೇಳಿದಾಗಲೂ ನಂದಿನಿ ಕಣ್ಣಿಗೆ ಸ್ಪ್ರೇ ಮಾಡಿದ್ದಾರೆ. ಈ ನಡವಳಿಕೆ ಬಗ್ಗೆಯೂ ಸುದೀಪ್ ಮನವರಿಕೆ ಮಾಡಿದ್ದು, ಜಯಶ್ರೀ ಕಣ್ಣೀರು ಹಾಕುತ್ತಾ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *