ಸೋನು ಅಂದ್ರೆ ಹಾಲು ಇದ್ದಂಗೆ, ಆದರೆ ಸಡನ್ನಾಗಿ ಉಕ್ಕುತ್ತಾಳೆ ಎಂದ ಗುರೂಜಿ

Public TV
1 Min Read

ಪ್ರೇಕ್ಷಕರನ್ನ ಮೋಡಿ ಮಾಡುತ್ತಿರುವ ಏಕೈಕ ಶೋ ಅಂದ್ರೆ ಬಿಗ್ ಬಾಸ್ ಓಟಿಟಿ. ಇದೀಗ ನಾಲ್ಕನೇ ವಾರ ಪೂರ್ಣಗೊಳಿಸಿ, ಐದನೇ ವಾರದತ್ತ ಮುನ್ನುಗ್ಗುತ್ತಿದೆ. ಭಿನ್ನ ಮನಸ್ಥಿತಿ ಇರುವ ಸ್ಪರ್ಧಿಗಳು ಈ ಶೋನಲ್ಲಿ ಭಾಗಿಯಾಗಿದ್ದಾರೆ. ಇನ್ನು ನೇರವಾಗಿ ಮಾತನಾಡುವ ಮೂಲಕ ಮನೆಮಂದಿಯ ಕೆಂಗಣ್ಣಿಗೆ ಗುರಿಯಾಗಿರುವ ವೈರಲ್ ಹುಡುಗಿ ಸೋನು, ನಾಲ್ಕನೇ ವಾರದಲ್ಲಿ ಕಳಪೆ ಎಂಬ ಹಣೆಪಟ್ಟಿ ಪಡೆದು ಜೈಲು ಸೇರಿದ್ದರು. ಇದೀಗ ಸೋನು ವ್ಯಕ್ತಿತ್ವ ಹೇಗೆ ಎಂಬುದನ್ನ ಗುರೂಜಿ ಈ ವೇಳೆ ಬಣ್ಣಿಸಿದ್ದಾರೆ.

ಬಿಗ್ ಬಾಸ್ ಮನೆಯ ಆಟ ಮುಗಿಯಲು ಇದೀಗ ಎರಡೇ ವಾರ ಬಾಕಿದೆ. ದಿನದಿಂದ ದಿನಕ್ಕೆ ಹಲವಾರು ಬದಲಾವಣೆಗಳಾಗುತ್ತಿದೆ. ಇನ್ನು ಮನೆಯಲ್ಲಿ ಸಾಕಷ್ಟು ವಿಚಾರವಾಗಿ ಹೈಲೈಟ್ ಆಗಿರುವ ಸೋನು ಶ್ರೀನಿವಾಸ ಗೌಡ, ಇಡೀ ವಾರದ ಪರ್ಫಾಮೆನ್ಸ್ ಮೇರೆಗೆ ಕಳಪೆ ಬೋರ್ಡ್ ಪಡೆದು, ಜೈಲು ಸೇರಿದ್ದರು. ಇನ್ನು ಜೈಲಿನಲ್ಲಿರುವಾಗ ಮನೆಯವರನ್ನ ಬೈದುಕೊಂಡೆ ಮನೆಯಲ್ಲಿದ್ದರು. ಈ ವೇಳೆ ಸೋನು ಅವರನ್ನ ಇತರ ಸ್ಪರ್ಧಿಗಳು ಬಂದು ಸಮಾಧಾನಿಸಲು ಪ್ರಯತ್ನಿಸಿದ್ದರು. ಇನ್ನು ಆರ್ಯವರ್ಧನ್ ಗುರೂಜಿ, ಸೋನು ಒಟ್ಟಾರೆ ವ್ಯಕ್ತಿತ್ವದ ಬಗ್ಗೆ ಬಣ್ಣಿಸಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

ನಾನು ನೋಡಿದಂತೆ ನೀನು ಒಂಥರಾ ಹಾಲು ಇದ್ದಂಗೆ. ಸಿಟ್ಟಾದರೆ ಒಂದೇ ಸಲ ಉಕ್ಕುತ್ತೀಯ, ಪಾತ್ರೆ ಸರಿಯಿಲ್ಲ ಅಂದ್ರೆ ಒಂದೇ ಸಲ ಒಡೆದು ಸಲ ಹೊಡೆದು ಹೋಗುತ್ತೀಯ ಎಂದು ಆರ್ಯವರ್ಧನ್ ಮಾತನಾಡಿದ್ದಾರೆ. ಗುರೂಜಿ ಹೀಗೆ ಹೇಳಿದಕ್ಕೆ ಸೋನು ನಕ್ಕಿದ್ದಾರೆ. ಆದರೆ, ನಾನು ಹಾಲಾಗಲು ಮತ್ತೆ ಟ್ರೈ ಮಾಡಲ್ಲ. ಮಾತನಾಡುತ್ತೀನಿ, ನಾರ್ಮಲ್ ಆಗಿರುತ್ತೀನಿ ಎಂದು ಸೋನು ಮಾತನಾಡಿದ್ದಾರೆ.

ಇನ್ನು ಕಿಚ್ಚನ ವೀಕೆಂಡ್ ಪಂಚಾಯಿತಿಯಲ್ಲಿ ಮನೆಯಲ್ಲಿ ಸೋನು ನಡೆಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ರಾಕೇಶ್ ಅಡಿಗ ಜೊತೆ ಸೋನು ನಡೆದುಕೊಂಡಿರುವ ರೀತಿಗೆ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡು ಮನವರಿಕೆ ಮಾಡಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *