BBK 11: ಟಾಸ್ಕ್‌ ವೇಳೆ ಪೆಟ್ಟು, ಆಸ್ಪತ್ರೆಗೆ ದಾಖಲಾದ ತ್ರಿವಿಕ್ರಮ್?

Public TV
2 Min Read

ಟಾಸ್ಕ್ ವೇಳೆ ಕಂಟೆಸ್ಟೆಂಟ್‌ಗೆ ಗಾಯವಾಗೋದು, ಅವರನ್ನು ಆಸ್ಪತ್ರೆಗೆ ದಾಖಲಿಸೋದು ಪ್ರತಿ ಸೀಸನ್‌ನಲ್ಲೂ ನಡೆದಿದೆ. ಕಳೆದ ಬಾರಿ ಸಂಗೀತಾ ಮತ್ತು ಡ್ರೋನ್ ಪ್ರತಾಪ್‌ಗೆ ಕೆಮಿಕಲ್ ಮಿಕ್ಸ್ ಮಾಡಿದ್ದ ನೀರು ಎರೆಚಿದ್ದರಿಂದ ಕಣ್ಣಿಗೆ ಹಾನಿಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕನ್ನಡಕ ಹಾಕಿಕೊಂಡೇ ದೊಡ್ಮನೆಗೆ ವಾಪಸ್ಸಾಗಿದ್ದರು. ಕೈ ಕಾಲು ಮುರಿದುಕೊಂಡು ಕೆಲ ಕಂಟೆಸ್ಟೆಂಟ್‌ಗಳು ಬಿಗ್‌ಬಾಸ್ ಮನೆಯಿಂದಲೇ ಆಚೆ ಬಂದಿದ್ದೂ ಇದೆ. ಸೀಸನ್ 11ರಲ್ಲೂ ಅದು ಮುಂದುವರೆದಿದೆ. ಈ ಸೀಸನ್‌ನಲ್ಲಿ ಇದೇ ಮೊದಲ ಬಾರಿಗೆ ಟಾಸ್ಕ್‌ನಲ್ಲಿ ‘ಬಿಗ್‌ ಬಾಸ್’ ಸ್ಪರ್ಧಿ ತ್ರಿವಿಕ್ರಮ್ (Trivikram) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.

‘ಬಿಗ್‌ ಬಾಸ್ ಸೀಸನ್ 11’ (Bigg Boss Kannada 11) ಶುರುವಾಗಿ ಐದು ದಿನಗಳಾಗಿವೆ. ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆ ಕಾವು ಪಡೆದುಕೊಳ್ಳುತ್ತಿದೆ. ಮೊದಲ ದಿನದಿಂದಲೇ ಸ್ಪರ್ಧಿಗಳು ದ್ವೇಷ ಸಾಧಿಸ್ತಾ ಇದ್ದಾರೆ. ಬಿಗ್‌ಬಾಸ್ ಮನೆ ಒಂದು ದಿನವೂ ಶಾಂತವಾಗಿ ಉಳಿದಿಲ್ಲ. ಸ್ವರ್ಗ ನಿವಾಸಿಗಳು ಮತ್ತು ನಕರ ನಿವಾಸಿಗಳ ಮಧ್ಯೆ ಬಿಗ್ ಫೈಟ್ ನಡೆಯುತ್ತಲೇ ಇದೆ. ಒಂದೊಂದು ಸಲ ತಮ್ಮದೇ ಗುಂಪಿನ ಸದಸ್ಯರ ಜೊತೆಯೇ ಸ್ಪರ್ಧಿಗಳು ಜಗಳಕ್ಕೆ ಇಳಿದದ್ದುಂಟು. ಹಾಗಾಗಿ ಟಾಸ್ಕ್‌ನಲ್ಲಿ ತೀರಾ ತೀವ್ರತೆ ಕಾಣುತ್ತಿದೆ. ಗೆಲ್ಲುವುದಕ್ಕಾಗಿ ಎಂತಹ ರಿಸ್ಕ್ ತಗೆದುಕೊಳ್ಳಲು ಸ್ಪರ್ಧಿಗಳು ರೆಡಿ ಆಗಿದ್ದಾರೆ. ಈ ಪರಿಣಾಮ, ಬಿಗ್ ಬಾಸ್ ಸ್ಪರ್ಧಿ ತ್ರಿವಿಕ್ರಮ್ ಗಾಯಗೊಂಡಿದ್ದಾರೆ. ಇದನ್ನೂ ಓದಿ:‘ನನ್ನ ಹೃದಯದ ಒಂದು ಭಾಗ’ ಎನ್ನುತ್ತಾ ಸಿಹಿಸುದ್ದಿ ಕೊಟ್ಟ ಶ್ರೀನಿಧಿ ಶೆಟ್ಟಿ

5ನೇ ದಿನಕ್ಕೆ ಕಾಲಿಟ್ಟಿರೋ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ವೊಂದನ್ನು ನೀಡಲಾಗಿತ್ತು. ಬ್ಯಾಸ್ಕೆಟ್ ಬಾಲ್ ಚೆಂಡುಗಳನ್ನು ಸಂಗ್ರಹಿಸೋದು ಮತ್ತು ಅವುಗಳನ್ನು ತಮ್ಮ ಗೋಲ್‌ನಲ್ಲಿ ಇರಿಸಬೇಕಿತ್ತು. ಎದುರಾಳಿ ತಂಡದವರು ಗೋಲ್‌ನಲ್ಲಿ ಚೆಂಡುಗಳನ್ನು ಹಾಕದೇ ಇರೋ ರೀತಿಯಲ್ಲಿ ತಡೆಯಬೇಕಿತ್ತು. ಚೆಂಡು ಸಂಗ್ರಹಿಸಲು ಮತ್ತು ಅದನ್ನು ತಡೆಯಲು ಹರಸಾಹಸವೇ ನಡೆದಿದೆ. ಭಾರೀ ಜಟಾಪಟಿಯ ಮಧ್ಯ ಅವಘಡ ಸಂಭವಿಸಿದೆ. ತುಂಬಾ ಅಗ್ರೆಸ್ಸಿವ್ ಆಗಿ ಆಡುತ್ತಿದ್ದ ತ್ರಿವಿಕ್ರಮ್ ಈ ಟಾಸ್ಕ್‌ನಲ್ಲಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕನ್ಪೆಷನ್ ರೂಮ್‌ಗೆ ಕರೆಯಿಸಿ, ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಲಾಗ್ತಿದೆ. ಚಿಕಿತ್ಸೆ ಪಡೆದ ನಂತರ ಅವರು ವಾಪಸ್ ಬಿಗ್‌ ಬಾಸ್ ಮನೆಗೆ ಬಂದಿದ್ದಾರೆ ಅನ್ನೋದು ಸುದ್ದಿ.

ರಿಲೀಸ್ ಆಗಿರೋ ಪ್ರೊಮೋದಲ್ಲಿ ಚೆಂಡು ಕಬಳಿಸುವ ವೇಳೆ ಶಿಶಿರ್ ಕೂಡ ಕೆಳಗೆ ಬಿದ್ದಿರುವುದನ್ನು ನೋಡಬಹುದು. ಇದಷ್ಟೇ ಅಲ್ಲ, ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ಸಹ ಗಾಯಗೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟು ಏನೂ ಸುರೇಶ್‌ಗೆ ಆಗಿಲ್ಲವಂತೆ. ಒಂದು ಕಡೆ ಮನೆಯಲ್ಲಿ ಕುಸ್ತಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಲವ್‌ ಸ್ಟೋರಿ ಕೂಡ ಶುರುವಾಗಿದೆ. ಧರ್ಮ ಕೀರ್ತಿರಾಜ್ ಮೇಲೆ ಅನುಷಾ ಹಾಗೂ ಐಶ್ವರ್ಯಾಗೆ ಲೈಟ್ ಆಗಿ ಲವ್ವಾದಂತೆ ಕಾಣುತ್ತಿದೆ. ಇದೊಂದು ತ್ರಿಕೋನ ಲವ್‌ಸ್ಟೋರಿ ಆಗಿದ್ದು, ನಿಜವಾಗಿಯೂ ಇವರ ಮಧ್ಯ ಪ್ರೀತಿ ಅರಳಿದೆಯಾ? ಕಾದು ನೋಡಬೇಕು.

Share This Article