ಆರ್ಯವರ್ಧನ್ ಔಟ್: ರಂಪಾಟ ಮಾಡಿ ಕಣ್ಣೀರಾಕಿದ ರೂಪೇಶ್ ಶೆಟ್ಟಿ

Public TV
1 Min Read

ಕಿರುತೆರೆ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಆಟ (Bigg Boss) ಕೊನೆಗೊಳ್ಳಲು ಕೌಂಟ್‌ಡೌನ್ ಶುರುವಾಗಿದೆ. 6 ಜನ ಸ್ಪರ್ಧಿಗಳಿದ್ದ ಮನೆಯಲ್ಲಿ 5 ಜನ ಸ್ಪರ್ಧಿಗಳಾಗಿದ್ದಾರೆ. ಆರ್ಯವರ್ಧನ್ ಗುರೂಜಿಯನ್ನ ಎಲಿಮಿನೇಟ್ ಮಾಡುವ ಮೂಲಕ ಮನೆಮಂದಿಗೆ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ಗುರೂಜಿ ಆಟ ಅಂತ್ಯವಾಗಿದ್ದಕ್ಕೆ ರೂಪೇಶ್ ಶೆಟ್ಟಿ (Roopesh Shetty) ಕಣ್ಣೀರಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ (Bigg Boss House) ಸಾನ್ಯ ಅವರಂತೆಯೇ ಆರ್ಯವರ್ಧನ್ ಗುರೂಜಿ (Aryavardhan), ರೂಪೇಶ್ ಶೆಟ್ಟಿ (Roopesh Shetty) ಒಡನಾಟ ಹೊಂದಿದ್ದರು. ಗುರೂಜಿ ಅವರನ್ನ ತಂದೆ ಸ್ಥಾನದಲ್ಲಿ ಗೌರವಿಸುತ್ತಿದ್ದರು. ತಂದೆ ಮಗನಾಗಿಯೇ ದೊಡ್ಮನೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮಂಗಳವಾರ (ಡಿ.27) ಸಂಚಿಕೆಯಲ್ಲಿ ಗುರೂಜಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದರಿಂದ ರೂಪೇಶ್‌ಗೆ ಶಾಕ್ ಆಗಿದೆ. ಅಪ್ಪಾಜಿ ಬನ್ನಿ ಎಂದು ಕಣ್ಣೀರಿಟ್ಟಿದ್ದಾರೆ.

ಸಾನ್ಯ ಅಯ್ಯರ್ (Sanya Iyer) ಕೂಡ ಎಲಿಮಿನೇಟ್ ಆದಾಗ ರೂಪೇಶ್ ಕಣ್ಣೀರಿಟ್ಟಿದ್ದರು. ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ರೂಪೇಶ್ ಮತ್ತು ಗುರೂಜಿ ಜೊತೆಯಾಗಿಯೇ ಇದ್ದರು. ಇದೀಗ ಮಿಡ್ ನೈಟ್‌ನಲ್ಲಿ ಎಲಿಮಿನೇಷನ್ ನಡೆದ ರೀತಿ ನೋಡುಗರಿಗೂ ಜೊತೆಗೆ ಸ್ಪರ್ಧಿಗಳಿಗೂ ಬಿಗ್ ಶಾಕ್ ನೀಡಿದೆ. ಗುರೂಜಿ ಎಲಿಮಿನೇಟ್ ಎಂದು ತಿಳಿದ ಕೂಡಲೇ ರೂಪೇಶ್, ಅಪ್ಪಾಜಿ ಮಾತನಾಡಿ, ಬನ್ನಿ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮನೆಮಂದಿ ಕೂಡ ಈ ವೇಳೆ ಅವರಿಗೆ ಸಮಾಧಾನ ಮಾಡಿದ್ದಾರೆ. ಇದನ್ನೂ ಓದಿ:ದಿವ್ಯಾಳ ಆಸೆಯಂತೆ ದೊಡ್ಮನೆಗೆ ಎಂಟ್ರಿ ಕೊಟ್ಟ ಅರವಿಂದ್ ಕೆ.ಪಿ

ಇನ್ನೂ ಆರ್ಯವರ್ಧನ್ ಗುರೂಜಿ ಎಲಿಮಿನೇಷನ್ ನಂತರ ಟಾಪ್ ಸ್ಪರ್ಧಿಗಳಲ್ಲಿ ದಿವ್ಯಾ ಉರುಡುಗ ಕೂಡ ಒಬ್ಬರಾಗಿದ್ದಾರೆ. ರೂಪೇಶ್ ರಾಜಣ್ಣ, ರಾಕೇಶ್, ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ದಿವ್ಯಾ ಈ ಐವರಲ್ಲಿ ಯಾರಿಗೆ ವಿಜಯಲಕ್ಷಿö್ಮ ಒಲಿಯಲಿದೆ ಎಂಬುದನ್ನ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *