ಲಾಕ್‍ಡೌನ್ ನಿಯಮ ಉಲ್ಲಂಘಿಸಿದ ಸಚಿವ ಪ್ರಭು ಚೌವ್ಹಾನ್

Public TV
1 Min Read

ಬೀದರ್: ಸಾಮಾಜಿಕ ಅಂತರ ಕಾಪಾಡದೆ ಬೆಂಬಲಿಗರೊಂದಿಗೆ ಆಹಾರದ ಕಿಟ್ ಹಂಚುವ ಮೂಲಕ ಲಾಕ್‍ಡೌನ್ ನಿಯಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಉಲ್ಲಂಘನೆ ಮಾಡಿದ್ದಾರೆ.

ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಸಚಿವರೇ ಮುಂಜಾಗ್ರತಾ ಕ್ರಮಕೈಗೊಳ್ಳದೆ ನಿಯಮ ಉಲ್ಲಂಘನೆ ಮಾಡಿದ್ದರಿಂದ ಆಹಾರ ಧಾನ್ಯದ ಕಿಟ್ ಪಡೆಯಲು ನಾ ಮುಂದು ತಾ ಮುಂದು ಎಂದು ಸಾವಿರಾರು ಜನ ಮುಗಿಬಿದ್ದಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಒಂದು ಕ್ಷಣ ಆಹಾರ ಧಾನ್ಯ ಹಂಚುವ ಸ್ಥಳ ಜಾತ್ರೆಯಂತಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ.

ಇಂದು ಬೀದರ್ ನಗರದ ನೌಬಾದ್ ನಲ್ಲಿ ಜಿಎನ್ ಫೌಂಡೇಶನ್ ನಿಂದ ಆಹಾರ ಧ್ಯಾನ ಕಿಟ್ ಪಡೆಯಲು ಸಾವಿರಾರು ಜನ ಮುಗಿ ಬಿದ್ದದನ್ನು ನೋಡಿದ ಸಚಿವರು ಅಲ್ಲಿಂದ ಕಾಲ್ಕಿತ್ತರು. ಈಗಾಗಾಲೇ ಜಿಲ್ಲೆಯಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಒಬ್ಬರನ್ನು ಬಲಿ ಪಡೆಯುವ ಜೊತೆಗೆ ತನ್ನ ಸಂಖ್ಯೆಯನ್ನು 23ಕ್ಕೆ ಏರಿಕೆ ಮಾಡಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *