ಸುಡು ಬಿಸಿಲಿನಿಂದ ದೂರಾಗಿ ಮಂಜಿನಗರಿಯಾದ ಗಡಿ ಜಿಲ್ಲೆ

Public TV
1 Min Read

ಬೀದರ್: ಸದಾ ಬಿಸಿಲಿನ ಬೆಗೆಯಿಂದ ಸುಡುತ್ತಿದ್ದ ಗಡಿ ಜಿಲ್ಲೆ ಬೀದರ್ ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಮಂಜಿನನಗರಿಯಾಗಿ ಬದಲಾಗಿದ್ದು, ಮೊದಲ ಬಾರಿಗೆ ಕೂಲ್ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಬೀದರ್ ಜಿಲ್ಲೆ ಮಂಜಿನಿಂದ ಆವರಿಸಿಕೊಂಡಿದೆ. ಯಾವಾಗಲೂ ಕೆಂಡದಂತ ಬಿಸಿಲಿನ ಬೇಗೆಗೆ ಸುಡುತ್ತಿದ್ದ ಜನರು ಇಂದು ಮಂಜಿನ ವಾತವಾರಣಕ್ಕೆ ಮನಸೋತ್ತಿದ್ದಾರೆ.

ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ದಟ್ಟವಾದ ಮಂಜು ಕವಿದಿದ್ದು ಜನರು ಸುಂದರ ವಾತಾವರಣವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಚಳಿ ಗಡಿ ಜಿಲ್ಲೆಯಲ್ಲಿ ದಾಖಲಾಗಿದ್ದು, ಒಂದೆಡೆ ಜಿಲ್ಲೆ ಮಂಜಿನ ನಗರಿಯಾಗಿದೆ ಎಂದು ಜನರು ಖುಷಿ ಪಟ್ಟರೆ, ಇನ್ನೊಂದೆಡೆ ಚಳಿಗೆ ಹೈರಾಣಾಗಿದ್ದಾರೆ.

ಶಬ್ಬಲ್ ಬರಿದ್, ಕೋಟೆ, ರಿಂಗ್ ರೋಡ್ ಸೇರಿದಂತೆ ಹಲವು ಕಡೆ ಜನರು ಹೆಚ್ಚಾಗಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದರು. ಆದರೆ ಇಂದು ದಟ್ಟವಾದ ಮಂಜು ಕವಿದಿರುವ ವಾತಾವರಣ ಇರುವ ಪರಿಣಾಮ ಜನರು ಮನೆಯಿಂದ ಹೊರಗೆ ಬಾದರೆ ಬೆಚ್ಚಗೆ ಕುಳಿತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *