ತಾಯಿಯನ್ನು ಕಾಪಾಡಲು ಬಂದ ಮೂವರು ಮಕ್ಕಳು ಸಜೀವ ದಹನ

Public TV
1 Min Read

ಭೋಪಾಲ್: ಬೆಂಕಿ ಹಚ್ಚಿಕೊಂಡು ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದ ತಾಯಿಯನ್ನು ಉಳಿಸಲು ಹೋಗಿ ಮೂವರು ಹೆಣ್ಣು ಮಕ್ಕಳು ಸಜೀವವಾಗಿ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಶುಕ್ರವಾರ ಮಧ್ಯಪ್ರದೇಶದ ದಾಮೋಹ್‍ನ ಮೌನ್ಸಿಪುರ ಗ್ರಾಮದಲ್ಲಿ ನಡೆದಿದೆ.

ತಾಯಿ ರಾಣಿ ಲೋಧಿ ಮೊದಲಿಗೆ ಬೆಂಕಿ ಹಂಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಾಯಿಯನ್ನು ಕಂಡ ಮಕ್ಕಳು ಕಾಪಾಡಲು ಬಂದು ಸಜೀವ ದಹನವಾಗಿದ್ದಾರೆ. ತುಲ್ಸಾ (2), ಮುಸ್ಕಾನ್ (5) ಹಾಗೂ ಮಾನ್ಸಿ (7) ಸಾವನ್ನಪ್ಪಿದ ಕಂದಮ್ಮಗಳು.

ಲೋಧಿ ಬೆಂಕಿ ಹಚ್ಚಿಕೊಂಡು ಆತ್ಯಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ನೋಡಿದ ಮಕ್ಕಳು ತಾಯಿಯನ್ನು ಕಾಪಾಡಲು ಹೋಗಿ ತಾವು ಬೆಂಕಿಗೆ ಸಿಲುಕಿಕೊಂಡಿದ್ದಾರೆ. ಮಕ್ಕಳ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಬಂದು ಲೋಧಿಯನ್ನು ಸಮೀಪದ ಜಬಲ್ಪುರ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಬೆಂಕಿಯಿಂದ 70% ರಷ್ಟು ದೇಹ ಸುಟ್ಟು ಹೋಗಿದ್ದು, ಸಾವು ಬದುಕಿನಮ ಮಧ್ಯೆ ಹೋರಾಡುತ್ತಿದ್ದಾರೆ.

ಲೋಧಿ ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಹೊಟ್ಟೆ ನೋವನ್ನು ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ.

Share This Article
Leave a Comment

Leave a Reply

Your email address will not be published. Required fields are marked *