ಪುಟ್ಟಸ್ವಾಮಿ ಆರೋಪ ಸುಳ್ಳಾಗಿದ್ದು, ನೇಣು ಹಾಕಿಕೊಳ್ಳಲು ಹೇಳಿ: ಸಿಎಂ

Public TV
1 Min Read

ಮೈಸೂರು: ಬಿಜೆಪಿ ಮುಖಂಡ ಬಿಜೆ ಪುಟ್ಟಸ್ವಾಮಿ ಅವರ ಆರೋಪ ಸುಳ್ಳಾಗಿದ್ದು, ಅವರನ್ನು ನೇಣು ಹಾಕಿಕೊಳ್ಳಲಿ ಹೇಳಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಭೂಪಸಂದ್ರದ ಬಳಿ 300 ಕೋಟಿ ರೂ. ಬೆಲೆ ಬಾಳುವ ಜಾಗವನ್ನು ಅಕ್ರಮ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಕಳೆದ ವಾರ ಪುಟ್ಟಸ್ವಾಮಿ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದರು. ಈ ವೇಳೆ ನನ್ನ ಆರೋಪ ಸುಳ್ಳಾದರೆ ವಿಧಾನ ಸೌಧದಲ್ಲಿ ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಆರೋಪ ಮಾಡಿರುವವರು ಅವರೇ, ಅದನ್ನ ಸತ್ಯ ಅಂತ ಸಾಬೀತು ಮಾಡಬೇಕಿರುವುದು ಅವರೇ. ಈಗ ಅವರ ಆರೋಪ ಸುಳ್ಳಾಗಿದೆ. ಅವರನ್ನ ನಾನು ನೇಣು ಹಾಕಿಕೊಳ್ಳಲಿ ಅಂತ ನಾನು ಹೇಳೋಲ್ಲ, ಆದರೆ ಆರೋಪ ಮಾಡುವ ಮುನ್ನ ಯೋಚನೆ ಮಾಡಲಿ ಅಂತ ಹೇಳುತ್ತೇನೆ ಎಂದು ಹೇಳಿದರು.

ಪುಟ್ಟಸ್ವಾಮಿ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಮೊದಲು ನೇಣು ಹಾಕಿಕೊಳ್ಳಲಿ ಎಂದು ಹೇಳಿ ನಂತರ ಪಾಪ ಅವರು ಹಾಗೇಲ್ಲ ಮಾಡಿಕೊಳ್ಳುದು ಬೇಡ ಎಂದರು.

ಇದನ್ನೂ ಓದಿ: ಸಿಎಂನಿಂದ 300 ಕೋಟಿ ರೂ. ಬೆಲೆ ಬಾಳುವ ಜಾಗ ಡಿನೋಟಿಫಿಕೇಶನ್

 

 

Share This Article
Leave a Comment

Leave a Reply

Your email address will not be published. Required fields are marked *