ರಾಜ್ಯ ಯುವ ಬ್ರಿಗೇಡ್ ವತಿಯಿಂದ ಭೀಮಾ ನದಿ ಸ್ವಚ್ಛತಾ ಕಾರ್ಯಕ್ರಮ

Public TV
1 Min Read

ಕಲಬುರಗಿ: ನಿರುಪಯುಕ್ತ ವಸ್ತುಗಳಿಂದ ಕಲುಷಿತಗೊಂಡಿರುವ ಭೀಮಾ ನದಿಯನ್ನ ಸ್ವಚ್ಛ ಮಾಡಲು ರಾಜ್ಯ ಯುವ ಬ್ರಿಗೇಡ್ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಘತ್ತರಗಿಯಲ್ಲಿರುವ ಭೀಮಾ ನದಿಯ ಸ್ವಚ್ಛತೆಯನ್ನು ಕೈಗೊಳ್ಳಲಾಗಿತ್ತು. ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಿದರು. ಚಕ್ರವರ್ತಿ ಸೂಲಿಬೆಲೆ ನೇತೃತ್ವದ ರಾಜ್ಯ ಯುವ ಬ್ರಿಗೇಡ್ ಸಂಘಟನೆಯೂ, ಈಗಾಗಲೇ ರಾಜ್ಯದ ವಿವಿಧಡೆ ಆರು ನದಿಗಳನ್ನ ಕ್ಲಿನ್ ಮಾಡಿದೆ.

ಇದೀಗ ಸ್ವಚ್ಚತಾ ಕಾರ್ಯಕ್ರಮವನ್ನ ಮುಂದುವರೆಸಿಕೊಂಡು ಹೋಗಲು ಭೀಮಾ ನದಿಯನ್ನ ಆಯ್ಕೆ ಮಾಡಿಕೊಂಡಿದ್ದು, ನದಿ ಸಂಪೂರ್ಣ ಸ್ವಚ್ಚಗೊಳ್ಳುವರೆಗೂ ಪ್ರತಿ ಭಾನುವಾರ ಯುವ ಬ್ರಿಗೇಡ್ ಪಡೆ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *