ಅರ್ಧ ಮುಖಕ್ಕೆ ಮಸಿ, ಎರಡು ಕಿವಿಗೂ ಹೂವು- ಉಡುಪಿಯಲ್ಲಿ ವಿಭಿನ್ನ ಪ್ರತಿಭಟನೆ

Public TV
2 Min Read

ಉಡುಪಿ: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಕೈಗೊಂಡಿರುವ ಭಾರತ್ ಬಂದ್ ನ ಎರಡನೇ ದಿನ ಉಡುಪಿಯಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆದಿದೆ.

ಜಿಲ್ಲಾ ಕೇಂದ್ರದಲ್ಲಿರುವ ಹೆಡ್ ಪೋಸ್ಟ್ ಆಫೀಸ್ ಆವರಣದಲ್ಲಿ ಅಂಚೆ ಇಲಾಖೆ ಸಿಬ್ಬಂದಿಯೊಬ್ಬರು ಪುಟ್ಗೋಸಿ ಕಟ್ಟಿಕೊಂಡು ಪ್ರತಿಭಟನೆ ಮಾಡಿದ್ದಾರೆ. ಪ್ಯಾಂಟಿನ ಮೇಲೆ ಪುಟ್ಗೋಸಿ ತೊಟ್ಟು ವಿನೂತನ ರೀತಿಯಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿದರು. ಅರ್ಧ ಮುಖಕ್ಕೆ ಮಸಿ ಬಳಿದುಕೊಂಡು, ಎರಡೂ ಕಿವಿಗೆ ಹೂವು ಇಟ್ಟು ತಮ್ಮ ಆಕ್ರೋಶ ಹೊರಹಾಕಿದರು.

ಸರ್ಕಾರ ನಮ್ಮನ್ನು ಪುಟ್ಗೋಸಿಯಲ್ಲಿ ನಿಲ್ಲಿಸಿದೆ. ಕಿವಿಗೆ ಹೂವಿಟ್ಟಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ನಮ್ಮ ಹಿರಿಯ ಅಧಿಕಾರಿಗಳು ಅಂಚೆ ಕಚೇರಿಯೊಳಗೆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಮೂಲಕ ಸಂದೇಶ ಸಾರುವುದು ಈ ಪುಟ್ಗೋಸಿ ಪ್ರತಿಭಟನೆಯ ಉದ್ದೇಶವಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಅಲ್ಲದೇ ಪ್ರಧಾನಿ ಮೋದಿಯವರನ್ನು ಕಟು ಮಾತಿನಲ್ಲಿ ಟೀಕಿಸಿದರು.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಪ್ರತಿಭಟನಾಕಾರ ರಾಘವೇಂದ್ರ ಬೆಳ್ವೆ, ಅಂಚೆ ಇಲಾಖೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದೇನೆ. 2004ರ ಇಲಾಖಾ ನಿಯಮದನ್ವಯ ಹಳೆಯ ಪಿಂಚಣಿಯನ್ನು ರದ್ದುಗೊಳಿಸಿ ಅದು ಬರೀ ಸಂಸದ ಹಾಗೂ ಶಾಸಕರಿಗೆ ಇನ್ನೂ ಕೂಡ ಅನ್ವಯವಾಗಿದೆ. ನಮಗೆಲ್ಲ ಬಿಕಾರಿಗಳಂತೆ ಹೊಸ ಪಿಂಚಣಿ ಸೇವೆಯನ್ನು ಆರಂಭಿಸಿದ್ದಾರೆ. ನಾವು ನಿವೃತ್ತಿ ಹೊಂದಿದ ಬಳಿಕ ಅದು ಜಾರಿಗೆ ಬರುವಾಗ ಅದರ ಬಿಸಿ ನಮಗೆ ತಟ್ಟಿತ್ತು. ಆಗಲೇ ನಮ್ಮ ಹಾಗೂ ವಿವಿಧ ಸಂಘಟನೆಗಳು ಹಳೆಯ ಪಿಂಚಣಿ ಬೇಕು ಅಂತ ಕೇಂದ್ರ ಸರ್ಕಾರದ ವಿರುದ್ಧ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಕಿವುಡು ಧೋರಣೆ ತೋರುತ್ತಿದೆ ಅಂತ ಕಿಡಿಕಾರಿದ್ದಾರೆ.

ನಾಲ್ಕೂವರೆ ವರ್ಷದಲ್ಲಿ ನಮಗೆ ಕೇಂದ್ರ ಸರ್ಕಾರ ನಮ್ಮ ಎರಡು ಕಿವಿಗೆ ಬಣ್ಣ ಬಣ್ಣದ ಹೂವಿಟ್ಟಿದೆ. ತಿಂಗಳಿಗೆ 500-600 ಪಿಂಚಣಿ ನೀಡಿದ್ರೆ ನಾವು ಹೆಂಡತಿ ಮಕ್ಕಳನ್ನು ಸಾಕುವುದು ಹೇಗೆ? ಅವರಿಗೂ ಜೀವನ ಭದ್ರತೆಯಿಲ್ಲ. ಹೀಗಾಗಿ ಮಿನಿಮಮ್ ಹಳೆಯ ಪಿಂಚಣಿ ಏನಿದೆಯೋ ಅದನ್ನೇ ದಯಪಾಲಿಸಿ ಅಂತ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ರು.

https://www.youtube.com/watch?v=-N2AwKLSx9g

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *