ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಚೀಪ್ ರಾಜಕೀಯ ಮಾಡುತ್ತಿದೆ: ಖೂಬಾ

Public TV
1 Min Read

ಬೀದರ್: ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಚೀಪ್ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಭಗವಂತ ಖೂಬಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೀದರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೇರೆ ದೇಶಕ್ಕೆ ಲಸಿಕೆ ಕಳಿಸಿದ್ದರಿಂದ ದೇಶದಲ್ಲಿ ಲಸಿಕೆ ಹಾಹಾಕಾರ ಶುರುವಾಗಿದೆ ಎಂದು ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ ದೇಶದಲ್ಲಿ ಲಸಿಕೆ ಎಷ್ಟು ಉತ್ಪಾದನೆಯಾಗುತ್ತಿದೆ, ಬೇರೆ ದೇಶಗಳಿಗೆ ಕೊಡಬೇಕು ಎಂಬುದು ನಮ್ಮ ಧೋರಣೆ ಇದ್ದು, ಪ್ರತಿ ದಿನ ನಾವು ಕೊಡುವ ಲಸಿಕೆ ಅನುಗುಣವಾಗಿ ಜನ ಬರಬೇಕಲ್ಲಾ ಎಂದಿದ್ದಾರೆ. ಇದನ್ನೂ ಓದಿ:ರವಿಗೆ ನೆಹರು ಬಗ್ಗೆ ಏನು ಗೊತ್ತು, ಪ್ರಿಯಾಂಕ್ ಖರ್ಗೆಗೆ ವಾಜಪೇಯಿ ಆಡಳಿತ ಗೊತ್ತಾ : ವಿಶ್ವನಾಥ್ ಕಿಡಿ

ಈಗಾಗಲೇ ಫ್ರೆಂಟ್ ಲೈನ್ ವಾರಿಯರ್ಸ್ ಸೇರಿದಂತೆ ಎಲ್ಲರಿಗೂ ಹಂತ ಹಂತವಾಗಿ ಲಸಿಕೆ ನೀಡುತ್ತಾ ಬಂದಿದೆ ಎಂದು ತಿಳಿಸಿದರು.ಇದನ್ನೂ ಓದಿ:ಸಂವಿಧಾನದತ್ತ ಸಂಸದ ಸ್ಥಾನಕ್ಕೆ ಬೆಲೆ ಕೊಡದ ಶ್ರೀನಿವಾಸ್‍ರದ್ದು ವಿಕೃತ ಮನಸ್ಥಿತಿ: ಬಿಜೆಪಿ ಟೀಕೆ

Share This Article
Leave a Comment

Leave a Reply

Your email address will not be published. Required fields are marked *