ವಿಕೃತ ಮನಸ್ಸಿನವರಿಗೆ RSS ಅರ್ಥವಾಗಲ್ಲ- ಖೂಬಾ

Public TV
1 Min Read

– ಕಾಂಗ್ರೆಸ್ ಎಲ್ಲಾ ನಾಟಕಗಳನ್ನು ಬಿಡಬೇಕು

ತುಮಕೂರು: ವಿಕೃತ ಮನಸ್ಸಿನವರಿಗೆ ಆರ್‌ಎಸ್‌ಎಸ್‌ ಅರ್ಥವಾಗುವುದಿಲ್ಲ. ಆರ್‌ಎಸ್‌ಎಸ್‌ ವಿರುದ್ಧ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪವನ್ನು ಕೇಂದ್ರ ಸಚಿವ ಭಗವಂತ್ ಖೂಬಾ ಖಂಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಒಂದು ವಿಕೃತ ಮಾನಸಿಕತೆಯ ವರ್ಗ ಇದೆ. ಅವರು ಆರ್‍ಎಸ್‍ಎಸ್‍ನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಜಾತಿ ಓಲೈಕೆಗಾಗಿ ಕಳೆದ 70 ವರ್ಷಗಳಿಂದ ತುಷ್ಟಿಕರಣದ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧ ಹೇಳಿಕೆ ಕೊಡುವ ಮುನ್ನ ಒಂದು ಬಾರಿ ಶಾಖೆಗೆ ಹೋಗಿ ಬರಬೇಕು. ದೇಶ ಭಕ್ತಿ, ಶಿಸ್ತು ಅದರಲ್ಲಿ ಕಲಿಸಲಾಗುತ್ತದೆ. ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಭಾರತವನ್ನು ವಿಶ್ವಗುರು ಮಾಡುವ ಸಂಸ್ಕಾರ ಅದರಲ್ಲಿ ಕಲಿಸಲಾಗುತ್ತದೆ ಎಂದರು.

Bhagwanth khuba Bidar MP

ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ಕುರಿತು ಪ್ರತಿ ಕ್ರಿಯೆ ನೀಡಿದ ಅವರು, ಕಳೆದ ಐದಾರು ವರ್ಷದಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಿಯಂತ್ರಣದಲ್ಲಿದೆ. ನಾಲ್ಕೈದು ದಿನದಿಂದ ನಡೆಯುತ್ತಿರುವ ಘಟನೆಗೆ ಕೇಂದ್ರ ಸರ್ಕಾರ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು

 

ವಾರಣಾಸಿಯಲ್ಲಿ ಪ್ರಿಯಾಂಕಾ ವಾದ್ರಾ ಮಂತ್ರಪಠಣ ಮಾಡಿದ ವಿಚಾರವಾಗಿ ಪ್ರಿಯಾಂಕಾ ವಾದ್ರಾಗೆ ಮಂತ್ರ ಬರುತ್ತಾ? ಆ ಕುಟುಂಬದವರು ಕೇವಲ ಚುನಾವಣೆ ಸಂದರ್ಭದಲ್ಲಿ ಹಿಂದು ಆಗೋದು, ಮುಸ್ಲಿಂರನ್ನು ಓಲೈಕೆ ಮಾಡಲು ಅವರ ಟೋಪಿ ಹಾಕಿಕೊಳ್ಳೋದು, ಆಗಾಗ ಕ್ರಿಶ್ಚಿಯನ್ ಆಗೋದು, ಈ ಎಲ್ಲಾ ನಾಟಕಗಳನ್ನು ಅವರು ಬಿಡಬೇಕು. ನಿಮ್ಮ ಜಾತಿ ಯಾವೋದು ಅದರಲ್ಲಿ ಭಕ್ತಿ ಇಡಿ, ಆದರೆ ಇಂಥಹ ಡೋಂಗಿತನ ಬಿಡಬೇಕು ಎಂದು ಕಾಂಗ್ರೆಸ್ ವಿರುದ್ಧವಾಗಿ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *