Exclusive ಹ್ಯಾರಿಸ್ ಮಗನ ಮತ್ತೊಂದು ಕರ್ಮಕಾಂಡ ಬಿಚ್ಚಿಟ್ಟ ಮಹಿಳೆ

Public TV
2 Min Read

ಬೆಂಗಳೂರು: ಮಹಿಳೆಯೊಬ್ಬರು ಶಾಸಕ ಹ್ಯಾರಿಸ್ ಮಗ ಮೊಹಮದ್ ನಲ್ಪಾಡ್ ನ ಮತ್ತೊಂದು ಕರ್ಮಕಾಂಡವನ್ನು ಬಯಲು ಮಾಡಿದ್ದಾರೆ.

ಮೂರು ವರ್ಷದ ಹಿಂದೆ ಪೂರ್ಣಿಮಾ ದಾಸ್ ಎಂಬುವರ ಮೇಲೆ ನಲ್ಪಾಡ್ ಗುಂಡಾಗಿರಿ ಮಾಡಿದ್ದು, ಈಗ ಆ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಹ್ಯಾರಿಸ್ ಪುತ್ರನ ಗುಂಡಾವರ್ತನೆ ಕುರಿತು ಪೊಲೀಸರಿಗೆ ದೂರು ನೀಡಲು ಹೋಗಿದ್ದೆ. ಆಗ ಯಾವ ಪೊಲೀಸರು ದೂರು ಸ್ವೀಕರಿಸದೇ ಅಲೆದಾಡಿಸಿದ್ದರು ಎಂದು ನೊಂದ ಪೂರ್ಣಿಮಾ ದಾಸ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೂರ್ಣಿಮಾ ದಾಸ್, ನಾನು ಬೆಂಗಳೂರಿನಲ್ಲಿ ಎನ್‍ಜಿಓ ಆಗಿದ್ದರಿಂದ ದಕ್ಷಿಣ ಭಾರತದ ಎನ್‍ಜಿಓ ಕಾನ್ಫರೆನ್ಸ್ ಗೆ ಹೋಗಿದ್ದೆ. ಅಲ್ಲಿ ನಡೆಯುತ್ತಿದ್ದ ಚಟುವಟಿಗೆಗಳು ತುಂಬಾ ಅನುಮಾನಸ್ಪದವಾಗಿ ನಡೆಯುತ್ತಿತ್ತು. ಅಲ್ಲಿ ನಾವು ಹಿಂದೂಗಳು ಎಂದು ಹೇಳಿಕೊಳ್ಳಲು ಮಾತ್ರವಲ್ಲ. ಹಿಂದೂಗಳೆಲ್ಲ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ನಾನು ಈ ಬಗ್ಗೆ ನಾನು ಧ್ವನಿ ಎತ್ತಿದ್ದಕ್ಕೆ ಅಲ್ಲಿದ್ದ ಮುಸ್ಲಿಮರೆಲ್ಲ ಒಂದಾಗಿ ನನ್ನ ಜೊತೆ ಕೆಟ್ಟದ್ದಾಗಿ ವರ್ತಿಸಿದರು ಎಂದು ಹೇಳಿದ್ದಾರೆ.

ಎನ್‍ಜಿಓ ಕಾನ್ಫರೆನ್ಸ್ ಅಂತಾ ಕರೆದು ಇಸ್ಲಾಂ ಧರ್ಮದ ಪ್ರಚಾರ ಕಾರ್ಯ ಮಾಡಲು ಮುಂದಾಗಿದ್ದರು. ಈ ಬಗ್ಗೆ ನಾನು ಪ್ರಶ್ನೆ ಮಾಡಿದ್ದೆ. ನಂತರ ನಾನು ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ ಮಾಡಲು ಹೋಗಿದ್ದೆ. ಆದರೆ ಪೊಲೀಸರಿಗೆ ಹ್ಯಾರಿಸ್ ಮತ್ತೆ ಮಗ ಕರೆ ಮಾಡಿ ದೂರು ತೆಗೆದುಕೊಳ್ಳದಂತೆ ಸೂಚಿಸಿದ್ದರು. ಅದೇ ರೀತಿ ದೂರಿನ ಕಾಪಿಯನ್ನು ಕೂಡ ಹರಿದು ಚೂರು ಚೂರು ಮಾಡಿದ್ದರು.

ಅಷ್ಟೇ ಅಲ್ಲದೇ ನನ್ನ ಮೇಲೆ ಎಂಎಲ್‍ಎ ಹ್ಯಾರಿಸ್ ಮತ್ತು ಮಗ ಮೊಹಮದ್ ನಲ್ಪಾಡ್ ನ ಬೆಂಬಲಿಗರು ಎಂಜಿ ರಸ್ತೆಯ ಹೋಟೆಲ್ ಕನಪಿ ಮುಂದೆ ಹಲ್ಲೆ ಮಾಡಲು ಪ್ರಯತ್ನ ಮಾಡಿದ್ದರು. ಆದ್ದರಿಂದ ಈಗ ಮತ್ತೆ ಅವರು ನನ್ನ ಮೇಲೆ ಹಲ್ಲೆ ಮಾಡುವ ಸಾಧ್ಯತೆಯಿದ್ದು ನನಗೆ ಜೀವ ಬೆದರಿಕೆ ಇದೆ. ಆದ್ದರಿಂದ ನಾನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹೋಗುತ್ತಿದ್ದೇನೆ ಎಂದು ನೊಂದ ಪೂರ್ಣಿಮಾ ದಾಸ್ ಹೇಳಿದ್ದಾರೆ. ಇದನ್ನು ಓದಿ: ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಕೊನೆಗೂ ಪೊಲೀಸರಿಗೆ ಶರಣಾದ ಶಾಸಕ ಹ್ಯಾರಿಸ್ ಪುತ್ರ

Share This Article
Leave a Comment

Leave a Reply

Your email address will not be published. Required fields are marked *