ಸಾಲಮನ್ನಾ ಮಾಡೋದಾದ್ರೆ ನಾನೂ ಸಾಲ ತೆಗೆದುಕೊಳ್ತಿದ್ದೆ: ಉಪರಾಷ್ಟ್ರಪತಿ

Public TV
1 Min Read

ಬೆಂಗಳೂರು: ದೇಶದಲ್ಲಿ ರೈತರ ಸಾಲಮನ್ನಾ ಮಾಡುವುದು ಒಳ್ಳೆಯ ಸಂಪ್ರದಾಯ ಅಲ್ಲ. ಸಾಲಮನ್ನಾ ಮಾಡುತ್ತಾರೆ ಎಂದಾದರೆ ನಾನು ಕೂಡ ಬ್ಯಾಂಕಿನಲ್ಲಿ ಸಾಲ ಪಡೆಯುತ್ತಿದ್ದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ 107ನೇ ಭಾರತೀಯ ಸೈನ್ಸ್ ಕಾಂಗ್ರೆಸ್ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ದೇಶ ಶೇ.60ರಷ್ಟು ಕೃಷಿ ಅವಲಂಬಿತವಾಗಿದೆ. ನಾನು ಒಬ್ಬ ರೈತನ ಮಗ. ಆದರೆ ರೈತರ ಸಾಲಮನ್ನಾ ತಾತ್ಕಾಲಿಕ ಪರಿಹಾರವಾಗುತ್ತದೆ ಎಂದರು.

ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಕೇವಲ ರೈತರ ಸಾಲಮನ್ನಾ ಮಾಡಿದರೆ ಸಮಸ್ಯೆ ಪರಿಹಾರ ಆಗಲ್ಲ. ಆದ್ದರಿಂದ ರೈತರ ಸಾಲಮನ್ನಾ ಒಳ್ಳೆಯ ಯೋಜನೆ ಅಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *