ಅಪಘಾತ ಮಾಡಿ, ರಿಪೇರಿ ಖರ್ಚು ಕೊಡ್ತೀನೆಂದು ಕೈಕೊಟ್ಟ ಧಾರವಾಹಿ ನಟ

Public TV
1 Min Read

– ನಟ ದಿಲೀಪ್ ಶೆಟ್ಟಿ ವಿರುದ್ಧ ದೂರು ದಾಖಲು

ಬೆಂಗಳೂರು: ಅಪಘಾತ ಮಾಡಿ, ರಿಪೇರಿ ಖರ್ಚು ಕೊಡುತ್ತೇನೆ ಎಂದು ಹೇಳಿ ಈಗ ಉಲ್ಟಾ ಹೊಡೆದ ಆರೋಪದ ಹಿನ್ನೆಲೆಯಲ್ಲಿ ವಿದ್ಯಾವಿನಾಯಕ ಧಾರವಾಹಿ ನಟ ದಿಲೀಪ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.

ಈ ಘಟನೆ ತಡರಾತ್ರಿ 2.30 ರ ವೇಳೆಗೆ ಚಾಮರಾಜಪೇಟೆ ನಾಲ್ಕನೇ ಮುಖ್ಯ ರಸ್ತೆಯಲ್ಲಿ ನಡೆದಿದ್ದು, ಯುವತಿಯ ಜೊತೆ ಕಾರಿನಲ್ಲಿ ಬಂದ ದಿಲೀಪ್, ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ದೂರು ನೀಡಬೇಡಿ ಕಾರಿನ ರಿಪೇರಿ ಖರ್ಚು ನಾನೇ ಕೊಡುತ್ತೇನೆ ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ ಬಂದು ಇನ್ನೋವಾ ಕಾರಿನ ಚಾಲಕನೇ ನನಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದಿಲೀಪ್ ಆರೋಪಿಸಿದ್ದಾರೆ. ಈಗ ಕಾರು ಚಾಲಕ ತಿಪ್ಪೇಸ್ವಾಮಿ ಮತ್ತು ದಿಲೀಪ್ ಇಬ್ಬರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡು, ಇಬ್ಬರು ಚಿಕ್ಕಪೇಟೆ ಸಂಚಾರಿ ಠಾಣೆಯಲ್ಲಿ ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *