ಮೋದಿ ರೋಡ್ ಶೋಗೆ ಮೊದಲೇ ಸಿದ್ದರಾಮಯ್ಯ ಪರಿಶೀಲನಾ ಯಾತ್ರೆ

Public TV
1 Min Read

ಬೆಂಗಳೂರು: ಮಾರ್ಚ್ 12 ರಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru Mysuru Expressway) ಪ್ರಧಾನಿ ಮೋದಿ ರೋಡ್ ಶೋ (Narendra Modi Roadshow) ನಡೆಸಲಿದ್ದಾರೆ. ಆದರೆ ಇದಕ್ಕೆ 3 ದಿನಗಳ ಮುನ್ನವೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಯಲ್ಲೇ ಸಿದ್ದರಾಮಯ್ಯ (Siddaramaiah) ಅವರ ಪರಿಶೀಲನಾ ಯಾತ್ರೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

MYS SIDDARAMAIAH 1

ಪ್ರಧಾನಿ ಎಂಟ್ರಿಗೂ ಮೊದಲೇ ಮಾಜಿ ಸಿಎಂ ಕ್ರೆಡಿಟ್ ಕ್ಲೈಮಿಂಗ್‌ ಯಾತ್ರೆ ನಡೆಸುತ್ತಾರೆ ಎಂದು ಹೇಳಲಾಗಿದೆ. ದಶಪಥ ರಸ್ತೆ ವಿಚಾರದಲ್ಲಿ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಕ್ರೆಡಿಟ್ ತೆಗೆದುಕೊಳ್ಳುವ ವಿಚಾರದಲ್ಲಿ ಕಿತ್ತಾಟ ನಡೆಯುತ್ತಿದೆ. ಇದನ್ನೂ ಓದಿ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಕ್ರೆಡಿಟ್ ನಮ್ಮ ಸರ್ಕಾರಕ್ಕೇ ಸಲ್ಲಬೇಕು: ಪ್ರತಾಪ್ ಸಿಂಹಗೆ ಸಿದ್ದು ಟಾಂಗ್

ಈ ಸಂಬಂಧ ಮಾರ್ಚ್ 9ರಂದು ಸಿದ್ದಲಿಂಗಪುರದಲ್ಲಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಲು ನಿರ್ಧರಿಸಿದ್ದಾರೆ. ಅದಕ್ಕೂ ಮುಂಚೆ ದಶಪಥ ರಸ್ತೆಯ ಲೋಪದೋಷಗಳನ್ನ ಪರಿಶೀಲಿಸಿ, ಅದರ ಸಮಸ್ಯೆಗಳನ್ನ ಜನರ ಮುಂದಿಡಲು ಕೈಪಾಳಯ ಪ್ಲಾನ್ ಮಾಡಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ನಾನು ಸರಳ, ಸಜ್ಜನ ರಾಜಕಾರಣಿ, ಹಣ ವಾಪಸ್ ಪಡೆದೇ ಪಡೀತಿನಿ – ಮಾಡಾಳ್

siddaramaiah 6

ಯುಪಿಎ ಅವಧಿಯಲ್ಲಿ ಈ ಯೋಜನೆ ಟೇಕಾಫ್ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರೆ, ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಇದು ಮೋದಿ ಸರ್ಕಾರದ ಕೊಡುಗೆ ಎಂದು ತಿರುಗೇಟು ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಹಳೇ ಮೈಸೂರು ಭಾಗದಲ್ಲಿ ದಶಪಥ ರಸ್ತೆ ಪ್ರಭಾವ ಬೀಳುವ ಪರಿಣಾಮ ಎರಡು ಪಕ್ಷಗಳ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *