ಮೆಟ್ರೋ ಪಿಲ್ಲರ್ ದುರಂತ – ಶನಿವಾರ BMRCL ಕೈ ಸೇರಲಿದೆ IISC ವರದಿ

Public TV
2 Min Read

ಬೆಂಗಳೂರು: ಮೆಟ್ರೋ ಪಿಲ್ಲರ್ (Metro Pillar) ದುರಂತ ಆಗಿ ಒಂದು ವಾರ ಕಳೆದಿದ್ದು, ಘಟನೆ ಸಂಬಂಧ ಐಐಎಸ್‌ಸಿ (IISC) ಸಿದ್ಧವಾಗಿದೆ. ಇದರ ವರದಿ ಶನಿವಾರದೊಳಗೆ ಬಿಎಂಆರ್‌ಸಿಎಲ್ (BMRCL) ಕೈ ಸೇರಲಿದೆ.

ಕಳೆದ ವಾರ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ ಘಟನೆ ಸಂಬಂಧ ಪ್ರಕರಣದ ತನಿಖೆ ನಡೆಸಿದ್ದ ಐಐಎಸ್‌ಸಿ ವರದಿ ಸಿದ್ಧಪಡಿಸಿದೆ. ತಜ್ಞರ ತಂಡ ಇದೇ ಶನಿವಾರ ಬಿಎಂಆರ್‌ಸಿಎಲ್‌ಗೆ ತನಿಖೆ ರೀಪೋರ್ಟ್ ಸಲ್ಲಿಸಲಿದ್ದು, ತನಿಖೆಯಲ್ಲಿ ಘಟನೆಗೆ ಕಾರಣವಾದ ಅಂಶ ಹೊರಬಿದ್ದಿದೆ.

ಪಿಲ್ಲರ್ ದುರಂತಕ್ಕೆ ಸಂಬಂಧಪಟ್ಟಂತೆ ಐಐಎಸ್‌ಸಿ ತಜ್ಞರು ಘಟನೆ ಬಳಿಕ ಒಂದು ವಾರದಿಂದ ತನಿಖೆ ಕೈಗೊಂಡಿದ್ದರು. ಸದ್ಯ ತನಿಖೆಯಲ್ಲಿ ಗುತ್ತಿಗೆ ಕಂಪನಿ ಎನ್ಸಿಸಿ ನಿರ್ಲಕ್ಷ್ಯ ಬಟಾಬಯಲಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಖುದ್ದು ಐಐಎಸ್‌ಸಿ ತಜ್ಞ ಚಂದ್ರ ಕಿಶನ್ ಮಾಹಿತಿ ನೀಡಿದ್ದು, ಸ್ಥಳೀಯ ಗುತ್ತಿಗೆ ಕಂಪನಿಯ ಸ್ಥಳೀಯ ಎಂಜಿನಿಯರ್‌ಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ, ಅಷ್ಟು ಎತ್ತರದ ಪಿಲ್ಲರ್ ನಿರ್ಮಾಣ ಮಾಡಿದ್ದೇ ಪಿಲ್ಲರ್ ಬೀಳಲು ಕಾರಣವಾಗಿದೆ. ಜೊತೆಗೆ ಈ ವೇಳೆ ಎಂಜಿನಿಯರ್‌ಗಳು ಕೆಲಸಗಾರರಿಗೆ ಅಗತ್ಯ ಕ್ರಮಗಳ ಬಗ್ಗೆ ಸೂಚನೆ ನೀಡಿರುವುದು ಕೂಡ ಗಮನಕ್ಕೆ ಬಂದಿದೆ. ಈ ಎಲ್ಲಾ ವಿಚಾರಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಎಂಟಿಬಿಯಿಂದ ಕವ್ವಾಲಿ ಆಯೋಜನೆ – ಹಣದ ಮಳೆ ಸುರಿಸಿದ ಮುಸ್ಲಿಂ ಮುಖಂಡರು

ಇತ್ತ ಐಐಟಿ (IIT) ವರದಿ ಕೂಡ ಸಿದ್ಧವಾಗಿದ್ದು, ಪೊಲೀಸರ ಕೈ ಸೇರಲಿದೆ. ಕಳೆದ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಐಐಟಿ ತಂಡ ಹಲವು ಸ್ಯಾಂಪಲ್‌ಗಳನ್ನು ಸಂಗ್ರಹಿಸಿತ್ತು. ರಿಪೋರ್ಟ್ನಲ್ಲಿ ಘಟನೆಗೆ ಕಾರಣ, ಯಾರ ನಿರ್ಲಕ್ಷ್ಯ ಎನ್ನುವುದರ ಸಂಪೂರ್ಣ ವರದಿ ಸಿದ್ಧಪಡಿಸಿದ್ದು, ಈ ಎಲ್ಲದರ ಬಗ್ಗೆ ವರದಿಯನ್ನು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್‌ಗೆ ನೀಡಲಿದ್ದಾರೆ. ಇದನ್ನೂ ಓದಿ: ಜೋಡೋ ಯಾತ್ರೆ ವೇಳೆ ಭದ್ರತಾ ಲೋಪ – ರಾಗಾ ಅಪ್ಪಿಕೊಳ್ಳಲು ಓಡಿದ ವ್ಯಕ್ತಿ

ಒಟ್ಟಾರೆ 2 ವರದಿಗಳು ಶನಿವಾರದೊಳಗೆ ಬಿಎಂಆರ್‌ಸಿಎಲ್ ಕೈ ಸೇರಲಿದೆ. ಬಳಿಕ ಘಟನೆಗೆ ಕಾರಣ ಏನು ಎನ್ನುವುದು ಕೂಡ ಸ್ಪಷ್ಟವಾಗಿ ತಿಳಿದು ಬರಲಿದೆ. ಆದರೆ ಬಳಿಕ ಬಿಎಂಆರ್‌ಸಿಎಲ್ ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *