ಲೋನ್ ರಿಕವರಿಗೆ ಬಂದವನ ಎದೆ ಸೀಳಿದ ಉದ್ಯಮಿ

Public TV
1 Min Read

ಬೆಂಗಳೂರು: ಲೋನ್ ರಿಕವರಿಗೆ ಬಂದವನ ಮೇಲೆ ಉದ್ಯಮಿಯೊಬ್ಬರು ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಕಲ್ಯಾಣ ನಗರದ ಲಿವಿಂಗ್‍ವಾಲ್ ಅಪಾರ್ಟ್‍ಮೆಂಟ್ ಬಳಿ ನಡೆದಿದೆ.

ಐಟಿ ಉದ್ಯಮಿ ಮಯೂರೇಶ್ ಹಾರ್ಲೆ ಡೇವಿಡ್ಸನ್ ಬೈಕ್ ಖರೀದಿಸುವಾಗ ಹೆಚ್.ಡಿಎ.ಫ್‍ಸಿ ಬ್ಯಾಂಕ್‍ನಲ್ಲಿ ಲೋನ್ ಪಡೆದಿರುತ್ತಾರೆ. ಮಯೂರೇಶ್ ಪಡೆದಿರುವ ಲೋನ್ ಹಣದಲ್ಲಿ ಕೇವಲ 32 ಸಾವಿರ ಮಾತ್ರ ಬಾಕಿ ಉಳಿಸಿಕೊಂಡಿದ್ದರು. 32 ಸಾವಿರ ಲೋನ್ ಕ್ಲೀಯರ್ ಮಾಡುವಂತೆ ಸಯ್ಯದ್ ಅರ್ಪಾದ್ ಮಯೂರೇಶ್ ಜೊತೆ ಫೋನ್ ನಲ್ಲಿ ವಾಗ್ವಾದ ನಡೆಸಿದ್ದಾನೆ.

ವಾಗ್ವಾದ ವಿಕೋಪಕ್ಕೆ ಹೋದಾಗ ಸಯ್ಯದ್ ಅರ್ಪಾದ್ ಉದ್ಯಮಿ ವಾಸವಿರುವ ಲಿವಿಂಗ್‍ವಾಲ್ ಅಪಾರ್ಟ್‍ಮೆಂಟ್ ಮುಂದೆ ಬಂದು ಗಲಾಟೆ ಮಾಡಿದ್ದಾನೆ. ಗಲಾಟೆ ಆಗುತ್ತಿದ್ದಂತೆ ಅರ್ಪಾದ್ ಸಂಬಂಧಿ ಅಬ್ದುಲ್ ಸಲೀಂ ಅಂಡ್ ಟೀಂನನ್ನ ಅಪಾರ್ಟ್‍ಮೆಂಟ್ ಬಳಿ ಕರೆಸಿಕೊಂಡಿದ್ದಾರೆ. ಮಯೂರೇಶ್ ಸಹಾಯಕ್ಕೆ ಗೆಳೆಯ ಉದ್ಯಮಿ ಅಮರೇಂದರ್ ಬಂದು ಗಲಾಟೆಯನ್ನು ನಿಲ್ಲಿಸಲು ಮುಂದಾಗಿದ್ದಾರೆ. ಅರ್ಪಾದ್ ಮತ್ತು ಸಲೀಂ ಟೀಂ ಉದ್ಯಮಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅರ್ಪಾದ್ ಅಂಡ್ ಟೀಂ ಹಲ್ಲೆಗೆ ಮುಂದಾಗುತ್ತಿದ್ದಂತೆ ಉದ್ಯಮಿ ಅಮರೇಂದರ್ ತನ್ನ ಬಳಿ ಇದ್ದ ಪಿಸ್ತೂಲ್‍ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿದ ಮೇಲೆ ಹಲ್ಲೆಗೆ ಮುಂದಾಗಿದ್ದಕ್ಕೆ ಅರ್ಪಾದ್ ಸಂಬಂಧಿ ಸೈಯ್ಯದ್ ಸಲೀಂ ಎದೆಯ ಭಾಗಕ್ಕೆ ಅಮರೆಂದರ್ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಸಯ್ಯದ್ ಸಲೀಂ ಎದೆಯ ಭಾಗಕ್ಕೆ ಗುಂಡು ತಗುಲಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉದ್ಯಮಿಗಳಾದ ಮಯೂರೇಶ್, ಅಮರೇಂದರ್ ಹಾಗೂ ಅರ್ಪಾದ್ ನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಗಲಾಟೆ ಮಾಡಿದ ಎರಡು ಗ್ಯಾಂಗ್ ಅನ್ನು ವಶಕ್ಕೆ ಪಡೆದು ಘಟನೆಯ ಸತ್ಯಾಸತ್ಯತೆ ತಿಳಿದುಕೊಳ್ಳು ಮುಂದಾಗಿದ್ದಾರೆ. ಪ್ರಕರಣದ ವಿಶೇಷ ಅಂದರೆ ಸಾಲ ಪಡೆದುಕೊಂಡವನ ಸಹಾಯಕ್ಕೆ ಬಂದ ಅಮರೇಂದರ್ ಬ್ಯಾಂಕ್ ಸಿಬ್ಬಂದಿಯ ಬೆಂಬಲಕ್ಕೆ ಬಂದ ಸಯ್ಯದ್ ಸಲೀಂ ಅನ್ನು ಶೂಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *