ಅಭಿಮಾನಿಗಳ ಹರಕೆ ತೀರಿಸಿದ ಡಿ.ಕೆ ಶಿವಕುಮಾರ್

Public TV
1 Min Read

ಬೆಂಗಳೂರು: ಅಭಿಮಾನಿಗಳು ಹೊತ್ತಿದ್ದ ಹರಕೆ ನಿಮಿತ್ತ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬೆಂಗಳೂರಿನ ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಡಿ.ಕೆ ಶಿವಕುಮಾರ್ ಜಾರಿ ನಿರ್ದೇಶನಾಲಯ(ಇಡಿ) ಬಂಧನದಿಂದ ಶೀಘ್ರವಾಗಿ ಬಿಡುಗಡೆಯಾದರೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ ಎಂದು ಡಿಕೆಶಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಹರಕೆ ತೀರಿಸಲು ಡಿಕೆಶಿ ಸರ್ಕಲ್ ಮಾರಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.

ಅಭಿಮಾನಿಗಳು ಡಿಕೆಶಿ ಕೈಯಿಂದ ಮುಷ್ಟಿ ಕಾಣಿಕೆ ಹಾಕಿಸುವ ಹರಿಕೆ ಹೊತ್ತಿದ್ದರು. ಆದ್ದರಿಂದ ಬೊಗಸೆ ತುಂಬ ನಾಣ್ಯಗಳನ್ನ ಇಟ್ಟುಕೊಂಡು ಹರಕೆ ಕಾಣಿಕೆಯನ್ನ ಮಾಜಿ ಸಚಿವರು ಹುಂಡಿಗೆ ಹಾಕಿದ್ದಾರೆ. ಈ ಮೂಲಕ ಅಭಿಮಾನಿಗಳ ಹರಕೆಯನ್ನು ನೆರವೇರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *