ಏರಿಯಾ ಹುಡ್ಗನ ಮೇಲೆ ಕಾಮದ ಕಣ್ಣು-ಗಂಡನಿಗೆ ಗೊತ್ತಾಗಿ ಉಲ್ಟಾ ಹೊಡೆದ ಯಜಮಾನಿ!

Public TV
1 Min Read

ಬೆಂಗಳೂರು: ಎರಿಯಾ ಹುಡುಗನ ಮೇಲೆ ಮನೆಯ ಯಜಮಾನಿಯೇ ಕಣ್ಣು ಹಾಕಿ ಲೈಂಗಿಕ ಕ್ರಿಯೆಗೆ ಕರೆದಿದ್ದಾಳೆ. ಈ ವಿಷಯ ಗಂಡನಿಗೆ ಗೊತ್ತಾದ ಮೇಲೆ ಯಜಮಾನಿ ನೀವಿಲ್ಲದ ವೇಳೆ ನನ್ನನ್ನು ಮಂಚಕ್ಕೆ ಕರೆದ ಎಂದು ಉಲ್ಟಾ ಡೈಲಾಗ್ ಹೊಡೆದಿದ್ದಾಳೆ.

ನಗರದ ಹೊರವಲಯ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಂಜುಳಾ ಎಂಬಾಕೆಯೇ ಉಲ್ಟಾ ಹೊಡೆದ ಯಜಮಾನಿ. ಮಂಜುಳಾ ತಾನು ವಾಸವಾಗಿರುವ ಏರಿಯಾದ ಮುನೇಂದ್ರ ಮೇಲೆ ಕಾಮದ ಕಣ್ಣು ಹಾಕಿದ್ದಾಳೆ. ಮನೆಯಲ್ಲಿ ಪತಿ ಸಂತೋಷ ಇಲ್ಲದ ವೇಳೆಯಲ್ಲಿ ಮುನೇಂದ್ರನನ್ನು ಸೆಕ್ಸ್ ಗೆ ಕರೆದಿದ್ದಾಳೆ. ಮಂಜುಳಾ ಮಾತಿಗೆ ಮುನೇಂದ್ರ ಒಪ್ಪಿಕೊಂಡಿಲ್ಲ.

ಸಂತೋಷ್

ಇದರಿಂದ ಕೋಪಗೊಂಡ ಮುಂಜುಳಾ ತನ್ನ ಪತಿ ಸಂತೋಷ್ ಮನೆಗೆ ಬರುತ್ತಿದ್ದಂತೆ, ಮುನೇಂದ್ರನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ. ಕೋಪಗೊಂಡ ಸಂತೋಷ ಪತ್ನಿಯೊಂದಿಗೆ ಸೇರಿಕೊಂಡು ರಾಡ್ ಹಾಗು ದೊಣ್ಣೆಯಿಂದ ಹಲ್ಲೆ ನಡೆಸಿ ಎರಡನೇ ಮಹಡಿಯಿಂದ ನನ್ನನ್ನು ಕೆಳಗೆ ತಳ್ಳಿದ್ದಾರೆ ಎಂದು ಮುನೇಂದ್ರ ಹೇಳಿದ್ದಾನೆ.

ಹಲ್ಲೆಯ ಪರಿಣಾಮ ಮುನೇಂದ್ರ ಬೆನ್ನಿನ ಮೂಳೆ ಹಾಗೂ ಕೈ ಕಾಲು ಮುರಿದಿದ್ದು, ನಗರದ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಮಂಜುಳಾ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮುನೇಂದ್ರ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಇತ್ತ ಮಂಜುಳಾ ವಿರುದ್ಧ ಮುನೇಂದ್ರ ಲೈಂಗಿಕ ಕ್ರಿಯೆಗೆ ಕರೆದು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *