ಅಂಜನೇಯನ ಭಕ್ತನಾಗಿ ರಾಮನವಮಿಗೆ ಗುಡ್ ನ್ಯೂಸ್ ಕೊಟ್ಟ ಧ್ರುವ

Public TV
1 Min Read

ಬೆಂಗಳೂರು: ಅಂಜನೇಯನ ಭಕ್ತನಾಗಿರುವ ಧ್ರುವ ಸರ್ಜಾ ರಾಮನವಮಿಯ ಪ್ರಯುಕ್ತ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಧ್ರುವ ಸರ್ಜಾ ಅವರು ಕಳೆದ ಮೂರು ವರ್ಷಗಳಿಂದ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪೊಗರು ಸಿನಿಮಾ ಯಾವಾಗ ಬಿಡುಗಡೆಯಾಗುತ್ತೋ ಎಂದು ಕಾಯುತ್ತಿರುವ ಅವರ ಅಭಿಮಾನಿಗಳಿಗಾಗಿ ನಾಳೆ ರಾಮನವಮಿ ಪ್ರಯುಕ್ತ ಸಿನಿಮಾದ ಖರಾಬು ಎಂಬ ಹಾಡನ್ನು ಬಿಡುಗಡೆಯಾಗಲಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಧ್ರುವ ಅವರು, ಹಾಯ್ ರಾಮನವಮಿಯ ಪ್ರಯುಕ್ತ ವಿಶೇಷ ಕಾಣಿಕೆ. ನಮ್ಮ ಬಾಸ್ ಆಂಜನೇಯ, ಅವರ ಬಾಸ್ ಶ್ರೀರಾಮನವರ ಇದೇ ರಾಮನವಮಿಯಂದು ನಿಮ್ಮೆಲ್ಲರ ಒತ್ತಾಯದಂತೆ ಪೊಗರಿನ ಖರಾಬು ಹಾಡು ನಾಳೆ ಅನಂದ್ ಆಡಿಯೋ ಯೂಟ್ಯುಬ್ ಚಾನೆಲ್ ಅಲ್ಲಿ ಸಂಜೆ 5:55ಕ್ಕೆ ಬಿಡುಗಡೆಯಾಗಲಿದೆ. ಮನೆಯಲ್ಲಿರಿ. ಆರೋಗ್ಯದಿಂದಿರಿ. ಹೊರಗೆ ಇದ್ದರೆ ನೀವ್ ಮಾತ್ರ ನೋಡುತ್ತಿದ್ರಿ. ಈಗ ನಿಮ್ಮ ಸಮಸ್ತ ಕುಟುಂಬದ ಆಶೀರ್ವಾದವೂ ಪೊಗರಿಗೆ ಸಿಗಲಿದೆ. ಜೈಆಂಜನೇಯ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಮದುವೆಯಾಗಿದ್ದ ಧ್ರುವ ಅವರು ಸತತ ಮೂರು ವರ್ಷಗಳಿಂದ ಪೊಗರು ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಮಾಸ್ ಆಗಿ ಕಾಣಿಸಿಕೊಂಡಿರುವ ಧ್ರುವ ಸರ್ಜಾಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ. ಈ ಚಿತ್ರಕ್ಕೆ ಬಿಗ್‍ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಈ ಸಿನಿಮಾವನ್ನು ನಂದ ಕಿಶೋರ್ ಅವರು ನಿರ್ದೇಶನ ಮಾಡಿದ್ದಾರೆ.

ಪೊಗರು ಚಿತ್ರತಂಡದಿಂದ ಈಗಾಗಲೇ ಚಿತ್ರದ ಪೋಸ್ಟರ್, ಡೈಲಾಗ್ ಟ್ರೈಲರ್ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿವೆ. ಈ ಹಿಂದೆ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಿದ್ದು, ಸಾಕಷ್ಟು ಜನಮನ್ನಣೆ ಪಡೆದುಕೊಂಡಿತ್ತು. ಚಿತ್ರದಲ್ಲಿ ಮಾಸ್ ಆಗಿ ಕಾಣಿಸಿಕೊಂಡಿರುವ ಧ್ರುವ ಸರ್ಜಾ ಅಷ್ಟೇ ಮಾಸ್ ಆಗಿ ಡೈಲಾಗ್ ಹೇಳಿದ್ದಾರೆ. ಮೊದಲ ಬಾರಿಗೆ ಧ್ರುವ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯನ್ನು ತೆರೆಮೇಲೆ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *