ದೇವಸ್ಥಾನಕ್ಕೆ ಕಾಲಿಟ್ರೆ ಕಾಲು ಕತ್ತರಿಸಿ ಬಿಡ್ತೀನಿ- ಶಾಸಕ ಹ್ಯಾರೀಸ್ ಭಂಟನ ಗೂಂಡಾಗಿರಿ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾಂಗ್ರೆಸ್ ಶಾಸಕ ಹ್ಯಾರೀಸ್ ಬೆಂಬಲಿಗರ ಗೂಂಡಾಗಿರಿ ಮಿತಿ ಮೀರಿದೆ. ದೇವಸ್ಥಾನಕ್ಕೆ ಕಾಲಿಟ್ಟರೆ ಕಾಲು ಕತ್ತರಿಸಿ ಬಿಡುತ್ತೇನೆ ಎಂದು ವ್ಯಕ್ತಿಯೊಬ್ಬರ ಮೇಲೆ ಗೂಂಡಾ ವರ್ತನೆ ತೋರಿದ್ದಾನೆ.

ಶಾಸಕ ಹ್ಯಾರೀಸ್ ಬೆಂಬಲಿಗ ಪಲ್ಲು ಪ್ರಕಾಶ್ ಎಂಬಾತ ಕಣ್ಣನ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲಸೂರಿನ ಸುಬ್ರಹ್ಮಣ್ಯ ದೇವಾಲಯದಲ್ಲಿ ಹಲ್ಲೆ ನಡೆದಿದೆ. ಕಣ್ಣನ್ ಕಳೆದ ಒಂದು ವರ್ಷದಿಂದ ದೇಗುಲದಲ್ಲಿ ಹೂವಿನ ಅಲಂಕಾರ ಮಾಡುತ್ತಿದ್ದರು. ”ನೀನು ದಲಿತ, ನಮ್ಮ ಏರಿಯಾ ದೇಗುಲಕ್ಕೆ ಕಾಲಿಡಬಾರದು, ನಿನ್ನ ಬ್ಯುಸಿನೆಸ್‍ನೆಲ್ಲಾ ಖಾಲಿ ಮಾಡಿಕೊಂಡು ಹೋಗಬೇಕು. ಇಲ್ಲವೆಂದಲ್ಲಿ ಕಾಲು ಕಟ್ ಮಾಡುತ್ತೇನೆ” ಎಂದು ಹಲ್ಲೆ ಮಾಡಿದ್ದಾನೆ.

ಈ ಬಗ್ಗೆ ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ಹ್ಯಾರೀಸ್ ಅಣ್ಣನ ಕಡೆಯಿಂದ ಸರಿಯಾಗಿ ಮಾಡಿಸ್ತಿನಿ ಎಂದು ಅವಾಜ್ ಹಾಕಿದ್ದಾನೆ. ಕಣ್ಣನ್‍ಗೆ ಪ್ರಕಾಶ್ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *