ತಾತ್ಕಾಲಿಕ ನಗರ ಪೊಲೀಸ್ ಆಯುಕ್ತರಾದ 5 ಮಕ್ಕಳು

Public TV
1 Min Read

– ಮಕ್ಕಳ ಆಸೆ ಈಡೇರಿಸಿದ ಭಾಸ್ಕರ್ ರಾವ್
– ಮಕ್ಕಳಿಂದ ಪೊಲೀಸರಿಗೆ ಧನ್ಯವಾದ

ಬೆಂಗಳೂರು: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಐದು ಮಕ್ಕಳ ಕೊನೆಯ ಆಸೆಯನ್ನು ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈಡೇರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರುತನ್ ಕುಮಾರ್, ಮಹಮದ್ ಶಕೀಬ್, ಅರ್ಷಾಥ್ ಪಾಷಾ, ಶ್ರಾವಣಿ ಬಂಟ್ಟಾಳ, ಸಯ್ಯದ್ ಇಮಾದ್ ಸೇರಿ 5 ಮಂದಿ ಮಕ್ಕಳ ನಗರ ಪೋಲೀಸ್ ಆಯುಕ್ತರನ್ನಾಗಿ ಮಾಡುವ ಮೂಲಕ ಅವರ ಕೊನೆಯ ಆಸೆ ಈಡೇರಿಸಿದರು. 5 ಮಕ್ಕಳಿಗೆ ಗಾರ್ಡ್ ಆಫ್ ಹಾನರ್ ಕೊಟ್ಟು ಕಮೀಷನರ್ ಸೀಟ್ ಅಲಂಕರಿಸಲು ಅನುವು ಮಾಡಿಕೊಟ್ಟರು. ಡಾಗ್ ಸ್ಕ್ವಾಡ್ ಕರೆದು ಅವರನ್ನ ಪರಿಚಯ ಮಾಡಿಸುವ ಕೆಲಸ ಕೂಡ ಮಾಡಿ ಪುಟಾಣಿಗಳ ಆಸೆ ಈಡೇರಿಸಲಾಯಿತು.

ಪೊಲೀಸ್ ಆಯಕ್ತರಾಗಿ ಕೆಲ ನಿಮಿಷ ಅಧಿಕಾರ ಚಲಾಯಿಸಿದ ಪುಟಾಣಿ ರುತನ್ ಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಟ ದರ್ಶನ್ ಐರಾವತ ಸಿನಿಮಾ ನೋಡಿ ನಾನು ಕೂಡ ಪೊಲೀಸ್ ಆಫೀಸರ್ ಆಗಬೇಕು ಎನ್ನುವ ಆಸೆ ಹುಟ್ಟಿಕೊಂಡಿತ್ತು. ಭಗವಂತ ನನ್ನ ಆಸೆಯನ್ನು ಗಿಡವಾಗಿ ಇರುವಾಗಲೇ ಚಿವುಟಿ ಹಾಕಿದ್ದಾನೆ. ತಾತ್ಕಾಲಿಕ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ನಡೆಸಲು ಅನುವು ಮಾಡಿಕೊಟ್ಟ ಬೆಂಗಳೂರು ಪೊಲೀಸರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಹೇಳಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *