ಬಿಎಂಟಿಸಿ ಬಸ್ ಚಾಲಕನ ಮೇಲೆ ತಂಡದಿಂದ ಹಲ್ಲೆ

Public TV
0 Min Read

ಬೆಂಗಳೂರು: ಕುಡಿದ ಮತ್ತಿನಲ್ಲಿ ತಂಡವೊಂದು ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ನಗರದ ಮೈಸೂರು ಸರ್ಕಲ್ ಬಳಿ ಬಸ್ಸಿಗೆ ಅಡ್ಡ ನಿಂತು ಚಾಲಕನಿಗೆ ಅವಾಜ್ ಹಾಕಿ ತಂಡ ಹಲ್ಲೆ ನಡೆಸಿದೆ. ಬಳಿಕ ಚಾಲಕ ಸಹಾಯಕ್ಕೆ ಬಂದ ಪ್ರಯಾಣಿಕರು, ವಾಹನ ಸವಾರರು ಕುಡುಕರನ್ನು ಹಿಡಿಯಲು ಯತ್ನಿಸಿದಾಗ ನಾಲ್ವರು ಕುಡುಕರಲ್ಲಿ ಮೂವರು ಪರಾರಿಯಾಗಿದ್ದಾರೆ.

ಸಿಕ್ಕಿಬಿದ್ದ ಓರ್ವನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಉಪ್ಪಾರಪೇಟೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *