ಅಪ್ಪನಿಗೆ ತೊಂದ್ರೆ ಆಗಬಾರದೆಂದು ಬೇರೆ ಮನೆ ಮಾಡಿದ್ದೇನೆ- ಶರತ್ ಬಚ್ಚೇಗೌಡ

Public TV
1 Min Read

ಬೆಂಗಳೂರು: ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಸಂಸದ ಬಚ್ಚೇಗೌಡ ಮಗ ಶರತ್ ಬಚ್ಚೇಗೌಡ ಕಣಕ್ಕಿಳಿಯೋದು ಪಕ್ಕಾ ಆಗಿದ್ದು, ಇತ್ತ ಶರತ್ ತಮ್ಮ ಕಾರ್ಯಕರ್ತರಿಗಾಗಿ ಸಂದೇಶ ರವಾನಿಸಿದ್ದಾರೆ.

ಹೊಸಕೋಟೆ ತಾಲೂಕಿನ ಮುದ್ದನಹಳ್ಳಿಯಲ್ಲಿ ತಮ್ಮ ಭಾಷಣದ ವೇಳೆ, ತಾಲೂಕಿನಲ್ಲಿ ನಾನು ನಂಬಿರುವ ಜನರ ವಿಶ್ವಾಸಕ್ಕೆ ಕಳಂಕ ಬರದಂತೆ ಕೆಲಸ ಮಾಡುತ್ತೇನೆ. ಶತ್ರುಗಳಿಗೂ ಒಳಿತನ್ನು ಬಯಸುವ ಸ್ವಭಾವ ನನ್ನದು. ನನ್ನ ನಿರ್ಧಾರದಿಂದ ಬಚ್ಚೇಗೌಡರಿಗೆ ತೊಂದರೆ ಆಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ನನ್ನ ತಾಲೂಕಿನ ಜನರ ಸೇವೆಗಾಗಿ ನಾನು ತೆಗೆದುಕೊಂಡಿರುವ ನಿರ್ಧಾರದಿಂದ ಬಚ್ಚೇಗೌಡರಿಗೆ ತೊಂದರೆ ಆಗಬಾರದೆಂದು ಲಾಲ್ ಬಾಗ್ ಮನೆ ಬಿಟ್ಟು ನಮ್ಮ ಹುಟ್ಟೂರಾದ ಬೆಂಡಿಗಾನಹಳ್ಳಿಯಲ್ಲಿ ಮನೆ ಮಾಡಿದ್ದೇನೆ ಎಂದರು.

ನನ್ನ ತಂದೆ ಬಚ್ಚೇಗೌಡರು ನನ್ನ ಪ್ರಚಾರಕ್ಕೆ ಬಾರಲಾಗದ ಸಂದರ್ಭದಲ್ಲಿ ಪ್ರತಿ ಗ್ರಾಮಗಳಲ್ಲಿರುವ ನಮ್ಮ ಮುಖಂಡರೇ ತಂದೆ-ತಾಯಿ ಸ್ಥಾನದಲ್ಲಿ ನಿಂತು ನನಗೆ ಆಶೀರ್ವಾದ ಮಾಡಿ ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಇದೇ ವೇಳೆ ಮನವಿ ಮಾಡಿಕೊಂಡರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಇತಿಹಾಸದಲ್ಲೇ ಉಪ ಚುನಾವಣೆ ನಡೆದಿಲ್ಲ, ಈ ಬಾರಿ ನಡೆಯುತ್ತಿದೆ. ಶರತ್ ಮೃದು ಸ್ವಭಾವ ಸಾಫ್ಟ್ ಆಗಿರುತ್ತಾನೆ. ಒತ್ತಡ, ಭಯಕ್ಕೆ ಮಣಿದು ಚುನಾವಣೆಯಿಂದ ಹಿಂದೆ ಸರಿಯುತ್ತಾನೆ ಅಂತಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯಲ್ಲ. ತಾಲೂಕಿನ ಸ್ವಾಭಿಮಾನಕ್ಕಾಗಿ, ಜನಕ್ಕೆ ಕೊಟ್ಟ ಮಾತಿಗಾಗಿ ಚುನಾವಣೆಯಿಂದ ಹಿಂದೆ ಸರಿಯಲ್ಲ ಎಂದರು.

ಬಚ್ಚೇಗೌಡರು ನಾನು ತಂದೆ-ಮಗನಾದರೂ ನಾವು ಒಟ್ಟಾಗಿ ಇರುತ್ತಿಲ್ಲ. ನಾನು ಚುನಾವಣೆಗೆ ನಿಂತರೆ ತಂದೆ ಬಚ್ಚೇಗೌಡರಿಗೆ ತೊಂದರೆ ಮಾಡುತ್ತಾರೆ ಅಂತ ಪ್ರಚಾರ ಮಾಡಿದ್ದಾರೆ. ತಂದೆಗೆ ತೊಂದರೆಯಾಗಬಾರದು ಅಂತ ನಾನು ನಮ್ಮ ತಂದೆಯವರ ಮನೆ ಬಿಟ್ಟು ಬಂದಿದ್ದೀನಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *