ಜಾರಕಿಹೊಳಿ ಬ್ರದರ್ಸ್ ಸವಾಲು- ಹೈಕಮಾಂಡ್ ಮೊರೆ ಹೋದ ಹೆಬ್ಬಾಳ್ಕರ್

Public TV
1 Min Read

ಬೆಂಗಳೂರು/ಬೆಳಗಾವಿ: ಸಹೋದರರ ಸವಾಲಿನ ಹಿಂದೆ ಬೇರೆಯದೆ ಕಹಾನಿ ಇದೆಯಾ ಎಂಬ ಪ್ರಶ್ನೆ ಕಾಡುತ್ತಿದ್ದು, ಪರಸ್ಪರ ಸವಾಲು ಹಾಕಿಕೊಂಡು ತೊಡೆ ತಟ್ಟಿರುವ ಸಹೋದರರ ನಡೆಯ ಹಿಂದೆ ಮ್ಯಾಚ್ ಫಿಕ್ಸಿಂಗ್ ನೆರಳಿದೆಯಾ ಎಂಬ ಅನುಮಾನವೊಂದು ಇದೀಗ ಕೈ ನಾಯಕರಲ್ಲಿ ಹುಟ್ಟಿಕೊಂಡಿದೆ.

ಹೌದು. ಗೋಕಾಕ್ ಅಂಗಳದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ನಡುವೆ ನಡೆಯುತ್ತಿರುವ ಫೈಟ್ ಅಸಲಿನಾ ಅಥವಾ ನಕಲಿನಾ ಅನ್ನೋ ಅನುಮಾನವೊಂದು ಕೈ ನಾಯಕರನ್ನ ಕಾಡುತ್ತಿದೆ. ಈ ಬಗ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗುತ್ತಿದೆ.

ಆದ್ದರಿಂದ ಗೋಕಾಕ್ ನಲ್ಲಿ ಸಹೋದರರ ನಡುವೆ ಮ್ಯಾಚ್ ಫಿಕ್ಸಿಂಗ್ ಏನಾದರು ನಡೆಯುತ್ತಿದೆಯಾ ಎಂಬ ಬಗ್ಗೆ ತಿಳಿಯಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ .ಕೆ.ಸಿ ವೇಣುಗೋಪಾಲ್ ಅವರೇ ಇಂದು ಬೆಳಗಾವಿಗೆ ಬರಲಿದ್ದಾರೆ. ಗೋಕಾಕ್ ಗೆ ಭೇಟಿ ನೀಡಲಿರುವ ವೇಣುಗೋಪಾಲ್, ಪಕ್ಷದ ಅಭ್ಯರ್ಥಿ ಲಖನ್ ಪರ ಪ್ರಚಾರ ಅಷ್ಟೆ ಅಲ್ಲದೆ ಗೋಕಾಕ್ ಅಖಾಡದ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಲಿದ್ದಾರೆ.

ಹೀಗೆ ಗೋಕಾಕ್ ಅಖಾಡದಲ್ಲಿ ಜಾರಕಿಹೊಳಿ ಸಹೋದರರ ನಡುವೆ ಮ್ಯಾಚ್ ಫಿಕ್ಸಿಂಗ್ ಏನಾದರು ನಡೆದಿದೆಯಾ ಎಂಬುದರ ಬಗ್ಗೆ ಕೈ ಹೈಕಮಾಂಡ್ ಕಣ್ಣಿಟ್ಟಿದ್ದು ಸ್ವತಃ ರಾಜ್ಯ ಕಾಂಗ್ರೆಸ್ ಉಸ್ತುವಾರಿಯೇ ಭೇಟಿಗೆ ಮುಂದಾಗಿದ್ದಾರೆ. ಸಾಹುಕಾರ್ ಸಹೋದರರ ಪಾಲಿಗೆ ಲಕ್ಷ್ಮಿ ದೂರಿನಿಂದ ಏನಾಗುತ್ತೆ ಅನ್ನೋದೇ ಸದ್ಯದ ಕುತೂಹಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *