ಪುಡಾರಿಗಳಿಗೆ ಡಿಸಿಪಿ ಶರಣಪ್ಪ ಖಡಕ್ ಎಚ್ಚರಿಕೆ

Public TV
1 Min Read

ಬೆಂಗಳೂರು: ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆ ವಿಭಾಗದ ಪುಡಾರಿಗಳನ್ನು ಕರೆಸಿ ಪರೇಡ್ ಮಾಡಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಪೂರ್ವ ವಿಭಾಗದ ಬಾಣಸವಾಡಿ, ಹಲಸೂರು, ರಾಮೂರ್ತಿ ನಗರ, ಬೈಯ್ಯಪ್ಪನ ಹಳ್ಳಿ, ಇಂದಿರಾ ನಗರ, ಜೀವನ್ ಭೀಮಾನಗರ ಸೇರಿದಂತೆ ಪೂರ್ವ ವಿಭಾಗದ ಎಲ್ಲಾ ಪೊಲೀಸ್ ರೌಡಿ ಶೀಟರ್ ಗಳನ್ನು ಕರೆದು ಪರೇಡ್ ಮಾಡಲಾಯ್ತು. ಪರೇಡ್‍ನಲ್ಲಿ ಸುಮಾರು 150 ಕ್ಕೂ ಹೆಚ್ಚು ಪುಡಿ ರೌಡಿಗಳಿಗೆ ಲೆಫ್ಟ್ ರೈಟ್ ಮಾಡಿ ಖಡಕ್ ವಾರ್ನ್ ಮಾಡಿದ್ರು. ಅಷ್ಟೇ ಅಲ್ಲದೇ ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ನಿರತರಾದರೆ ಗೂಂಡ ಆಕ್ಟ್ ಆಗಿ ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಅದರಲ್ಲೂ ಕೆಲ ದಿನಗಳಿಂದ ಪೂರ್ವ ವಿಭಾಗದ ರಾಮಮೂರ್ತಿ ನಗರ, ಬೈಯ್ಯಪ್ಪನಹಳ್ಳಿ ಅಸುಪಾಸಿನಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೌಡಿ ಪರೇಡ್ ಮಾಡಿ ಡಿಸಿಪಿ ವಾರ್ನ್ ಮಾಡಿದ್ದಾರೆ. ಪರೇಡ್ ವೇಳೆ ಆಕ್ಟಿವ್ ಆಗಿರುವ ಅಪಾಯಕಾರಿ ಕ್ರಿಮಿನಲ್‍ಗಳ ಮೇಲೆ ಹದ್ದಿನ ಕಣ್ಣಿಡುವಂತೆ ಆಯಾ ಠಾಣಾ ಇನ್ಸ್ ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿಗೆ ಡಿಸಿಪಿ ಶರಣಪ್ಪ ತಾಕೀತು ಮಾಡಿದರು. ಅಪರಾಧ ಚಟುವಟಿಕೆಯಲ್ಲಿ ಭಾಗಿರುತ್ತಿರುವುದು ಗಮನಕ್ಕೆ ಬಂದರೆ ಮುಲಾಜಿಲ್ಲದೇ ಬಂಧಿಸಿ ಜೈಲಿಗೆ ಕಳಿಸುವಂತೆ ಸೂಚಿಸಿದರು.

Share This Article
Leave a Comment

Leave a Reply

Your email address will not be published. Required fields are marked *