– ನಮಗೆ ಯಾವುದೇ ಅನುದಾನ ಕೊರತೆ ಆಗಿಲ್ಲ
ಬೆಂಗಳೂರು: ನಮಗೆ ಯಾವುದೇ ಅನುದಾನದ ಕೊರೆತೆ ಆಗಿಲ್ಲ. ಅವರು ಯಾರೋ ತಲೆ ಕೆಟ್ಟಿರಬೇಕು ಹೇಳಿಕೆ ಕೊಟ್ಟವರಿಗೆ. ರಾಜು ಕಾಗೆ (Raju Kage) ಇರಬಹುದು ಯಾರೇ ಇರಬಹುದು ಅವರ ಹೇಳಿಕೆ ನಾನು ಒಪ್ಪಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಅವರು ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದರು. ಈ ವೇಳೆ, ಬೇರೆ ಶಾಸಕರು ಯಾಕೆ ಹಾಗೇ ಹೇಳಿದ್ದಾರೋ ಗೊತ್ತಿಲ್ಲ. ನಮಗೆ ಅನುದಾನದ ಕೊರತೆ ಆಗಿಲ್ಲ. ಮೊದಲ ವರ್ಷ ಸ್ವಲ್ಪ ಸಮಸ್ಯೆ ಇತ್ತು. ಈಗ ಶಾಸಕರಿಗೆ ಏನು ಸಮಸ್ಯೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ದುಡ್ಡು ಕೊಟ್ಟರೆ ಮಾತ್ರ ವರ್ಕ್ ಆರ್ಡರ್: ಬಿಆರ್ ಪಾಟೀಲ್ ಬಳಿಕ ರಾಜು ಕಾಗೆ ದಂಗೆ
ಯಾವ ಸಚಿವರು ಇದುವರೆಗೂ ನಮ್ಮ ಹತ್ತಿರ ಹಣ ಕೇಳಿಲ್ಲ. ಬೇರೆ ಶಾಸಕರಿಗೆ ಏನೋ ಗೊತ್ತಿಲ್ಲ. ಕೆಲವರಿಗೆ ಇರಬಹುದು, ಸಚಿವರುಗಳು ಯಾರು ಕೇಳಲ್ಲ ಅವರ ಕೆಳಗೆ ಇರೋರು ಕಿಡಿಗೇಡಿಗಳು ಯಾರಾದ್ರೂ ಮಾಡಿರಬಹುದು. ಸ್ವಪಕ್ಷಿಯ ಶಾಸಕರು ಆರೋಪ ಮಾಡಿದ್ದರಿಂದ ಜಮೀರ್ ಅವರು ರಾಜೀನಾಮೆ ಕೊಡಿ ಅಂದಿದ್ದೆ. ಒಳ್ಳೆಯ ಉದ್ದೇಶದಿಂದಲೇ ನಾನು ಹೇಳಿದ್ದೆ ಎಂದಿದ್ದಾರೆ.
ನಾನು ಹೇಳಿದೆ ಅಂತ ಸಿಎಂ ಹಾಗೂ ಡಿಸಿಎಂ ರಾಜೀನಾಮೆ ಕೊಡಿಸಬೇಕಲ್ಲ. ಅದು ತನಿಖೆ ಆಗಬೇಕು ಅವರೇನು ಅಪರಾಧಿ ಅಲ್ಲ. ಈ ಬಿ.ಆರ್.ಪಾಟೀಲ್ರನ್ನು ನಂಬೋಕೆ ಆಗ್ತಿಲ್ಲ. ಬುಟ್ಟಿಯಲ್ಲಿ ಹಾವಿದೆಯೋ ಖಾಲಿ ಇದೆಯೋ ಗೊತ್ತಿಲ್ಲ. ಆ ತರ ಮನುಷ್ಯ ಅವರು. ಅವರೆಲ್ಲ ಈ ಹಿಂದೆ ಗಲಾಟೆ ಮಾಡಿ ಪಕ್ಷದ ವಿರುದ್ಧ ಮಾತನಾಡಿಯೇ ಅಧಿಕಾರ ಪಡೆದವರು. ಇನ್ನೂ, ನಾನು ತಪ್ಪು ಮಾಡಿದ್ದರೆ ರಾಜೀನಾಮೆ ಕೊಡ್ತೀನಿ ಅಂತ ಜಮೀರ್ ಹೇಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಅವ್ಯವಹಾರ ನಡೆದಂತೆ ಕಾಣ್ತೀಲ್ಲ. ಬಿ.ಆರ್.ಪಾಟೀಲ್ದು ಏನು ಹಕೀಕತ್ ಇದೆಯೋ ಗೊತ್ತಿಲ್ಲ. ನಾನು ಬಿಡ್ತೀನಿ ಬಿಡ್ತೀನಿ ಅಂತಿದಾರೆ. ಶಾಸಕಾಂಗ ಪಕ್ಷದ ಸಭೆ ಕರೆದು ಒಂದು ಸಲ ಶಾಸಕರಿಗೆ ಎಚ್ಚರಿಕೆ ಕೊಡೋದು ಒಳ್ಳೆಯದು ಎಂದಿದ್ದಾರೆ. ಇದನ್ನೂ ಓದಿ: ಸಿದ್ರಾಮಣ್ಣ ಸರ್ಕಾರದಲ್ಲಿ ದುಡ್ಡಿಲ್ಲ: ಪರಮೇಶ್ವರ್