ಶಾಸಕರಿಂದ ರೆಸಾರ್ಟಿನಲ್ಲಿ ಮೋಜಿನಾಟ – ಇತ್ತ ನೀರಿಗಾಗಿ ಮತದಾರರು ಹೋರಾಟ

Public TV
1 Min Read

ಬಳ್ಳಾರಿ: ರಾಜ್ಯದ ಜನ ಪ್ರತಿನಿಧಿಗಳು ರೆಸಾರ್ಟ್ ಗಳಲ್ಲಿ ಮೋಜ-ಮಸ್ತಿ ಮಾಡುತ್ತಿದ್ದಾರೆ. ಆದರೆ ಇತ್ತ ಇವರಿಗೆ ಮತ ಹಾಕಿ ವಿಧಾನ ಸೌಧಕ್ಕೆ ಕಳಿಸಿದ ಜನರು ಮಾತ್ರ ಕನಿಷ್ಠ ಕುಡಿಯುವ ನೀರಿಗೂ ಹೋರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಿ, ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಕುಡಿಯುವ ನೀರು ಸಹ ಪೂರೈಕೆ ಮಾಡಲು ಸಾಧ್ಯವಾಗದ ಜನಪ್ರತಿನಿಧಿಗಳು ಯಾಕೆ ನಮಗೆ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಸತತ ಎರಡು ವರ್ಷಗಳ ಕಾಲದಿಂದ ನಮಗೆ ಈ ಸಮಸ್ಯೆ ಇದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಮ್ಮ ಸಮಸ್ಯೆಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ, ಹೀಗೆ ಮುಂದುವರಿದರೇ, ನಮ್ಮ ಗತಿ ಏನು ಎಂದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ನಮಗೆ ಕೂಡಲೇ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *