ನಮಗೆ ಒಳ್ಳೆಯದು ಬರುತ್ತೆ, ಹನುಮಂತನ ರೀತಿ ಬೆಂಕಿ ಹಚ್ಚಲು ಬರುತ್ತೆ: ಬಿ.ಎಲ್ ಸಂತೋಷ್

Public TV
1 Min Read

ಬಳ್ಳಾರಿ: ನಾವೂ ಒಳ್ಳೆಯರಾಗಿ ಹೇಳುತ್ತೇವೆ ಕೇಳಿ. ಇಲ್ಲದಿದ್ದರೆ ನಮಗೆ ಹನುಮಂತನ ತರಹ ಬೆಂಕಿ ಹಚ್ಚಲು ಬರುತ್ತೆ ಎಂದು ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಬೆಂಕಿ ಹಚ್ಚುವ ಮಾತುಗಳನ್ನಾಡಿದ್ದಾರೆ.

ಬಳ್ಳಾರಿಯ ಮೋಕಾ ಸಮೀಪದ ಮರೂರು ಗ್ರಾಮದಲ್ಲಿ ಹನುಮ ಮಾಲಾಧಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂತೋಷ್, ಮತಾಂತರ ಮತ್ತು ಗೋಹತ್ಯೆ ಮಾಡೋರನ್ನು ಉದ್ದೇಶಿಸಿ ಈ ರೀತಿ ಮಾತನಾಡಿದ್ದಾರೆ. ಅಲ್ಲದೇ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಈ ಬಾರಿ ನಮ್ಮ ಪರ ತೀರ್ಪು ಬರುತ್ತದೆ. ನ್ಯಾಯಾಧೀಶರಿಗೆ ನಮ್ಮ ಕೂಗು ಕೇಳಿಸುವಂತೆ ಜೈ ಶ್ರೀ ರಾಮ್ ಎಂದು ಕೂಗಿ ಎಂದು ಹೇಳಿದರು.

ನ್ಯಾಯಾಲಯ ಸಾಮಾನ್ಯ ಜನರ ಭಾವನೆಗೆ ಬೆಲೆಕೊಟ್ಟು ವಿಚಾರಣೆ ಕೈಗೆತ್ತಿಕೊಂಡಿದೆ ಯಾವುದ್ಯಾವುದೋ ಕೇಸ್‍ಗಳಿಗೆ ಮಧ್ಯರಾತ್ರಿ 2 ಗಂಟೆಗೆ ತೀರ್ಪು ಕೊಡುತ್ತಾರೆ. ಈ ವಿಚಾರದಲ್ಲಿ ಹಾಗೇ ಮಾಡಲಿ. ತೀರ್ಪು ನಮ್ಮ ಪರ ಬರುತ್ತದೆ ಎಂದು ನಂಬಿಕೆ ಇದೆ. ಇನ್ನೊಂದು 25 ದಿನ ಕಾಯೋಣ, ಈ ಬಾರಿ ನಮ್ಮ ಸಂಕಲ್ಪ ಪೂರ್ಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *