ಬಂದೂಕು ನಮ್ಮಲ್ಲಿ ಇವೆ, ಅವುಗಳನ್ನ ಪೂಜೆ ಮಾಡಬೇಕೇ ಸಚಿವ ಅಂಗಡಿ ಪ್ರಶ್ನೆ

Public TV
1 Min Read

ಬೆಳಗಾವಿ: ಬಂದೂಕು ನಮ್ಮಲ್ಲಿ ಇವೆ ಅವುಗಳನ್ನ ಪೂಜೆ ಮಾಡಬೇಕೇ ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಖಾರವಾಗಿ ಪ್ರಶ್ನೆ ಮಾಡಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಇಂದು ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾನೂನು ಕಾಂಗ್ರೆಸ್ ಅಧಿಕಾರದ ಸಂದರ್ಭದಲ್ಲಿ ಜಾರಿಯಾಗಿರಲಿಲ್ಲ. ಕಾಂಗ್ರೆಸ್ ಮತ್ತು ಕೆಲವು ಪಕ್ಷಗಳು ಪ್ರಧಾನಿ ಮತ್ತು ಗೃಹಮಂತ್ರಿ ಹೆಸರನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಭಾರತದ ಯಾವ ನಾಯಕರಿಗೂ ಪೌರತ್ವ ಕಾಯ್ದೆಯೂ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಸರ್ಕಾರದ ಅಸ್ತಿಯನ್ನು ಹಾಳು ಮಾಡುವ ಕೆಲಸ ಮಾಡಬಾರದು. ಹಾಳು ಮಾಡಿದರೆ ಆಯಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಿದಾಗ ನೂರು ಜನ ಬಾಂಗ್ಲಾದೇಶದವರು ಬಂದಿದ್ದರು. ರೈಲ್ವೇ ಆಸ್ತಿಪಾಸ್ತಿ ಹಾನಿ ಮಾಡುವವರ ವಿರುದ್ಧ ಗುಂಡಿಕ್ಕಿ ಎಂಬ ಹೇಳಿಕೆಗೆ ಈಗಲೂ ನಾನು ಬದ್ಧ. ಆಯಾ ರಾಜ್ಯ ಸರ್ಕಾರಗಳು ರೇಲ್ವೆ ಆಸ್ತಿಪಾಸ್ತಿ ಕಾಪಾಡಲು ಹೇಳಿದ್ದೇವೆ. ನಮ್ಮ ಆಸ್ತಿ ಹಾಳು ಮಾಡಲು ಬರುವಾಗ ಸುಮ್ಮನೆ ಕೂರಬೇಕೇ? ಬಂದೂಕು ನಮ್ಮಲ್ಲಿ ಇವೆ ಅವುಗಳನ್ನ ಪೂಜೆ ಮಾಡಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ.

ಇದೇ ವೇಳೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಲ್ಲಿ ಆದ ಎರಡು ಸಾವಿಗೆ ವಿರೋಧ ಪಕ್ಷಗಳೇ ಹೊಣೆ. ವಿರೋಧ ಪಕ್ಷದವರಿಗೆ ಸ್ಟೇಟಸ್ ಇಲ್ಲ ಅವರೇನೂ ಮಾತಾಡುತ್ತಾರೆ. ದೇಶದ ಪ್ರಧಾನಿ ಬಗ್ಗೆ ಏನೂ ಮಾತಾಡಬೇಕು ಎಂದು ಗೊತ್ತಿಲ್ಲ ಅವರಿಗೆ ಎಂದು ಪ್ರತಿಪಕ್ಷಗಳ ಮೇಲೆ ಅಂಗಡಿ ವಾಗ್ದಾಳಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *